ಹನುಮಂತನ ಗುಡಿಯಲ್ಲಿ ಏಸು ಫೋಟೋ ವಿವಾದ; ಸುವರ್ಣ ನ್ಯೂಸ್‌ಗೆ ಆಡಳಿತ ಮಂಡಳಿ ಸ್ಪಷ್ಟನೆ

Aug 11, 2020, 11:54 AM IST

ಮೈಸೂರು (ಆ. 11): ಹನುಮಾನ್ ದೇವಸ್ಥಾನದಲ್ಲಿ ಏಸು ಕ್ರಿಸ್ತನ ಫೋಟೋ ಇಟ್ಟು ಪೂಜಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.  ಚಾಮರಾಜನಗರದ ಕೊಳ್ಳೇಗಾಲ ಅಂಜನೇಯ ದೇವಸ್ಥಾನ ಈ ವಿವಾದಕ್ಕೆ ಕಾರಣವಾಗಿದೆ. ಆಗಸ್ಟ್ 5 ರಂದು ಘಟನೆ ನಡೆದಿದ್ದು ಅಂದಿನಿಂದ ಅರ್ಚಕರ ಮೊಬೈಲ್‌ಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ.

ಹನುಮಂತನ ವಿಗ್ರಹದ ಕೆಳಗೆ ಏಸು ಕ್ರಿಸ್ತನ ಫೋಟೋ ಇಟ್ಟು ಪೂಜೆ ಮಾಡಲಾಗಿತ್ತು. ದೇವಸ್ಥಾನದೊಳಗೆ ಏಸುಫೋಟೋ ಬಂದಿದ್ದು ಹೇಗೆ? ಕ್ರೈಸ್ತ ಮಿಷನರಿಗಳ ಜೊತೆ ಕೈ ಜೋಡಿಸಿದ್ರಾ ಅರ್ಚಕ? ಸುವರ್ಣ ನ್ಯೂಸ್ ಜೊತೆ ಅರ್ಚಕ ರಾಘವನ್ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

ಭಜರಂಗಿ ಗರ್ಭಗುಡಿಯಲ್ಲಿ ಏಸು ಫೋಟೋ; ಮತಾಂತರಕ್ಕೆ ಕೈ ಜೋಡಿಸಿದ್ರಾ ಅರ್ಚಕ..?