Jun 16, 2021, 1:13 PM IST
ಬೆಂಗಳೂರು (ಜೂ. 16): ಸಿಎಂ ಪರ 65 ಶಾಸಕರ ಸಹಿ ಸಂಗ್ರಹಿಸಿದ್ದು ಸತ್ಯ. ಸಿಎಂ, ವರಿಷ್ಠರು ಹೇಳಿದ್ದಕ್ಕೆ ಸುಮ್ಮನಾಗಿದ್ದೇವೆ. ನಾಯಕತ್ವ ಬದಲಾವಣೆ ಸಾಧ್ಯವೇ ಇಲ್ಲ. ಈ ಬಗ್ಗೆ ಶಾಸಕರೆಲ್ಲಾ ಅರುಣ್ ಸಿಂಗ್ಗೆ ಮನವರಿಕೆ ಮಾಡುತ್ತೇವೆ. ಇದೇ ವೇಳೆ ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ದೂರು ನೀಡಲ್ಲ' ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಅರುಣ್ ಸಿಂಗ್ ಆಗಮನಕ್ಕೂ ಮುನ್ನ ಸಿಎಂ ನಿವಾಸಕ್ಕೆ ಸಚಿವರ ದೌಡು
'ಕೆಲವರು ಸೂಟು ಬೂಟು ಹಾಕಿಕೊಂಡು ಸಿಎಂ ಆಗುವ ತಿರುಕನ ಕನಸು ಕಾಣುತ್ತಿದ್ದಾರೆ. ಸೂಟು ಬೂಟನ್ನ ಅವರ ಕ್ಷೇತ್ರದ ಜಾತ್ರೆಗಳಲ್ಲಿ ಹಾಕಿಕೊಳ್ಳಲಿ' ಎಂದು ಬೆಲ್ಲದ್ಗೆ ಟಾಂಗ್ ಕೊಟ್ಟಿದ್ಧಾರೆ.