ಸಿದ್ದರಾಮಯ್ಯ ಆರೋಪಕ್ಕೆ ಸಿಎಂ ಬಿಎಸ್‌ವೈ ತಿರುಗೇಟು..!

Jul 6, 2020, 2:24 PM IST

ಬೆಂಗಳೂರು(ಜು.06): ಬಿಜೆಪಿ ಸರ್ಕಾರದಿಂದ ಕೊರೋನಾ ವೈರಸ್‌ ಉಪಕರಣಗಳ ಖರೀದಿಯಲ್ಲಿ ಮೂರು ಸಾವಿರ ಕೋಟಿ ರುಪಾಯಿಗಳ ಹಗರಣ ನಡೆದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ಈ ಆರೋಪಕ್ಕೆ ಸಿಎಂ ಬಿ.ಎಸ್‌. ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಉಪಕರಣಗಳ ಖರೀದಿಯ ದಾಖಲೆಗಳನ್ನು ಸಿದ್ದರಾಮಯ್ಯ ಅವರಿಗೆ ನೀಡುತ್ತೇವೆ. ವಿಧಾನಸೌಧದಲ್ಲಿ ಕುಳಿತು ದಾಖಲೆಗಳನ್ನು ಪರಿಶೀಲಿಸಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ರಾಜ್ಯದ ಮತ್ತೊಬ್ಬ ಶಾಸಕನಿಗೆ ಕೊರೋನಾ..!

ಸಿದ್ದರಾಮಯ್ಯ ದಾಖಲೆಗಳಿಲ್ಲದೇ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಸಿದ್ದರಾಮಯ್ಯ ಆರೋಪ ನಿರಾಧಾರ. ಉಪಕರಣಗಳ ಖರೀದಿ ದಾಖಲೆಗಳನ್ನು ಸಿದ್ದರಾಮಯ್ಯ ಅವರಿಗೆ ನೀಡ್ತೇವೆ. ದಾಖಲೆ ಪರಿಶೀಲಿಸಿ ಮಾತನಾಡಲಿ ಎಂದು ಬಿಎಸ್‌ವೈ ಸವಾಲೆಸೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ