Dec 12, 2021, 4:03 PM IST
ಬೆಂಗಳೂರು (ಡಿ. 12): ಮತಾಂತರ ನಿಷೇಧ ಮಸೂದೆ (Anti Conversion Bill) ಮಂಡನೆ ವಿಚಾರವಾಗಿ ಬಹಳ ಚರ್ಚೆಯಾಗುತ್ತಿದೆ. ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಸರ್ಕಾರ ಸಿದ್ಧತೆ ನಡೆಸುತ್ತಿದೆ.
Anti Conversion Bill: 'ಮದುವೆ ಆಗುವವರಲ್ಲಿ ಲವ್ ಇದ್ಮೇಲೆ ಜಿಹಾದ್ ಏಕೆ ಬರುತ್ತದೆ'?
ಈ ಬಗ್ಗೆವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. 'ಮತಾಂತರ ಮಸೂದೆಗೆ ನಮ್ಮ ವಿರೋಧವಿದೆ ಎಂದಿದ್ದಾರೆ. ಕ್ರೈಸ್ತ ಒಕ್ಕೂಟ ಸಹ ಸರ್ಕಾರದ ಮೇಲೆ ಒತ್ತಡ ಹಾಕಲು ಮುಂದಾಗಿದೆ. ಬೆಳಗಾವಿಯಲ್ಲಿ ಡಿ. 17 ರಂದು ಕ್ರೈಸ್ತ ಒಕ್ಕೂಟದಿಂದ ಧರಣಿ ನಡೆಯಲಿದೆ. ಮಸೂದೆ ಮಂಡನೆಯಾದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದೆ.