ಬೆಂಗಳೂರು ಗಲಭೆ ಹಿಂದೆ ಮತ್ತೊಬ್ಬ ಕಾರ್ಪೋರೇಟರ್ ಕೈವಾಡ?

Aug 14, 2020, 5:43 PM IST

ಬೆಂಗಳೂರು (ಆ. 14): ಇಡೀ ಬೆಂಗಳೂರನ್ನೇ ಒಮ್ಮೆ ತಲ್ಲಣಗೊಳಿಸಿರುವ ಗಲಭೆಯ ಒಂದೊಂದೇ ವಿಚಾರಗಳು ಅನಾವರಣಗೊಳ್ಳುತ್ತಿದೆ. ಒಬ್ಬೊಬ್ಬರದ್ದೇ ಮುಖವಾಡಗಳು ಕಳಚಿ ಬೀಳುತ್ತಿವೆ. ಗಲಭೆ ಹಿಂದೆ ಮತ್ತೊಬ್ಬ ಕಾರ್ಪೋರೇಟರ್ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಗಲಭೆಕೋರರ ಜೊತೆ ಕಾರ್ಪೋರೇಟರ್ ಜಾಕಿರ್‌ಗೆ ನೇರವಾದ ಸಂಬಂಧ ಇದೆ ಎನ್ನಲಾಗಿದೆ. ಪೊಲೀಸ್ ತನಿಖೆ ವೇಳೆ ಈ ವಿಚಾರ ಬಯಲಾಗಿದೆ. ಗಲಭೆಯಲ್ಲಿ ಜಾಕೀರ್ ಪಾತ್ರದ ಬಗ್ಗೆ ತನಿಖೆ ನಡೆಸಲು ಸಿಸಿಬಿ ಮುಂದಾಗಿದೆ. ಸ್ಪಷ್ಟನೆ ನೀಡುವಂತೆ ಜಾಕೀರ್‌ಗೆ ನೋಟಿಸ್ ಕೊಡುವ ಸಾಧ್ಯತೆ ಇದೆ. ಈ ಬಗ್ಗೆ ಸಿಸಿಬಿ ಮೂಲಗಳಿಂದ ಸುವರ್ಣ ನ್ಯೂಸ್‌ಗೆ ಮಾಹಿತಿ ಲಭ್ಯವಾಗಿದೆ. 

ಬೆಂಗ್ಳೂರು ಗಲಭೆ: ಮನೆ ಹೊತ್ತಿ ಉರಿದರೂ ದೂರು ನೀಡಲು ಹಿಂಜರಿಯುತ್ತದ್ದಾರಾ ಶಾಸಕ ಅಖಂಡ?