May 7, 2021, 11:36 AM IST
ಬೆಂಗಳೂರು (ಮೇ. 07): ಕೆಲ ದಿನಗಳ ಹಿಂದೆ ಜ್ವರದ ನಡುವೆಯೂ ಸಿಎಂ ಬಿಎಸ್ವೈ ಉಪಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ನಂತರ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಪ್ರಚಾರದ ವೇಳೆ ಸಿಎಂ ತಂಗಿದ್ದ ಬೆಳಗಾವಿ ಹೋಟೆಲ್ನ 12 ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇವರ ಸಂಪರ್ಕದಲ್ಲಿದ್ದವರಿಗೂ ಆತಂಕ ಎದುರಾಗಿದೆ.