Feb 18, 2020, 3:34 PM IST
ಬೆಂಗಳೂರು[ಫೆ. 18] ಸೋಮವಾರ ರಾತ್ರಿ ಸಚಿವ ಜಗದೀಶ್ ಶೆಟ್ಟರ್ ಮನೆಯಲ್ಲಿ ರಹಸ್ಯ ಸಭೆ ನಡೆದಿದೆ ಎಂಬ ಸುದ್ದಿಯ ಚರ್ಚೆ ಮತ್ತೆ ಮುಂದುವರಿದಿದೆ. ಜಗದೀಶ್ ಶೆಟ್ಟರ್ ಈ ಬಗ್ಗೆ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಪ್ರಭಾವಿ ಸಚಿವರ ಮನೆಯಲ್ಲಿ ಸ್ಥಾನ ವಂಚಿತರ ಹೊಸ ಲೆಕ್ಕಾಚಾರ
ಉತ್ತರ ಕರ್ನಾಟಕದ ಮೂಲ ಬಿಜೆಪಿ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು ಎಂಬ ಸುದ್ದಿ ಸಂಚಲನ ತಂದಿತ್ತು. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಶೆಟ್ಟರ್ ನಿರಾಕರಿಸಿದ್ದಾರೆ.