'ಹೈಕಮಾಂಡ್ ಸತಾಯಿಸಿಲ್ಲ; ಎಂಟಿಬಿ, ವಿಶ್ವನಾಥ್‌ಗೆ ಅನ್ಯಾಯ ಆಗಲ್ಲ'

Feb 8, 2020, 3:25 PM IST

ತುಮಕೂರು (ಫೆ.08): ಸಚಿವ ಸ್ಥಾನ ಕೊಡಲು ಬಿಜೆಪಿ ಹೈಕಮಾಂಡ್ ನಮನ್ನು ಸತಾಯಿಸಿಲ್ಲ, ಕಾರಣಾಂತರದಿಂದ ವಿಳಂಬ ಆಗಿದೆ, ಎಂದು ತುಮಕೂರಿನಲ್ಲಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಇದನ್ನೂ ನೋಡಿ | 'ನನಗೂ ಡಿಸಿಎಂ ಆಗುವ ಕನಸಿದೆ; ಸಿಎಂ ಒತ್ತಡದಲ್ಲಿರುವಾಗ ಕಷ್ಟ ನೀಡಲ್ಲ'...

ಹೊಸಕೋಟೆಯಲ್ಲಿ ಸೋತ ಎಂ. ಟಿ.ಬಿ. ನಾಗರಾಜ್ ಮತ್ತು ಹುಣಸೂರಿನಲ್ಲಿ ಸೋತ ವಿಶ್ವನಾಥ್‌ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ. ನಾವ್ಯಾವ ಖಾತೆಗೂ ಬೇಡಿಕೆ ಇಟ್ಟಿಲ್ಲ, ಸಿಎಂ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.