ಯೋಗಿ ಮಂಡ್ಯಕ್ಕೆ ಬುಲ್ಡೋಜರ್ ತಂದು ಕಟ್ಟಡ ಕೆಡುವುತ್ತೀನಿ ಅಂದ್ರಾ: ಹೆಚ್‌ಡಿಕೆ

Apr 30, 2023, 3:39 PM IST

ರಾಜ್ಯಕ್ಕೆ ಬಿಜೆಪಿಯ ದಿಗ್ಗಜ ನಾಯಕರು ಭೇಟಿ ನೀಡುತ್ತಿದ್ದು, ಪಕ್ಷ ವೀಕ್ ಇರುವ ಕಡೆ ಪ್ರಚಾರ ನಡೆಸಲಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್‌, ಜೆ.ಪಿ. ನಡ್ಡಾ ರಾಜ್ಯದಲ್ಲಿ ಕ್ಯಾಂಪೇನ್‌ ಮಾಡುತ್ತಿದ್ದಾರೆ.  ಯೋಗಿ ಆದಿತ್ಯನಾಥ್ ಮಂಡ್ಯ ಭೇಟಿ ವಿಚಾರವಾಗಿ  ಹೆಚ್‌.ಡಿ.ಕುಮಾರಸ್ವಾಮಿ ಮಾತನಾಡಿದ್ದು, ಬುಲ್ಡೋಜರ್ ತರುತ್ತೇನೆ ಎಂದು‌ ಹೇಳಿ ಹೋದ್ರಾ? ಮಂಡ್ಯದಲ್ಲಿ ಕಟ್ಟಡಗಳನ್ನು  ಕೆಡುವುತ್ತೀನಿ ಅಂದ್ರಾ? ಎಂದು ಪ್ರಶ್ನಿಸಿದರು. ಹಾಗೇ ನಮಗೆ ಕರ್ನಾಟಕ ಮಾಡೆಲ್‌ ಸಾಕು ಯುಪಿ‌ ಮಾಡೆಲ್ ಬೇಡಾ. ದೇಶಕ್ಕೆ ಕರ್ನಾಟಕವೇ ಮಾಡಲ್ ಆಗಿದೆ. ಕರ್ನಾಟಕ ಮಾಡೆಲ್ ಮುಂದೆ ಯಾವುದು ಇಲ್ಲ. ಯುಪಿ‌ ಮಾಡಲ್ ಬೇಕು ಅಂದ್ರೆ ಅಂತವರು ಅಲ್ಲೇ‌ ಹೋಗುವುದು ಉತ್ತಮ.ಫೇಕ್ ಎನ್‌ಕೌಂಟರ್ ಮಾಡಿಸು ಎನ್ನುವುದು ಅಲ್ಲಿಯದ್ದು. ನಮ್ಮಲ್ಲಿ ಆ ಪರಂಪರೆ ಇಲ್ಲ ಎಂದು ಹೇಳಿದರು.