ಗೆದ್ದವರೆಲ್ಲಾ ಮಂತ್ರಿಗಳಲ್ಲ; ಹೈಕಮಾಂಡ್ ಸಂಪುಟ ರಚನೆ ಆಟ ಬಲ್ಲವರಿಲ್ಲ!

Jan 13, 2020, 12:00 PM IST

ಬೆಂಗಳೂರು (ಜ. 13): ಬಿಎಸ್‌ವೈ ಸರ್ಕಾರದಲ್ಲಿ ಸಂಪುಟ ರಚನೆ ಕಸರತ್ತು ಶುರುವಾಗಿದೆ. ಆದರೆ ಇದು ಸುಲಭವಲ್ಲ. ಬಿಜೆಪಿ ಪಕ್ಷದೊಳಗೆ ಮಂತ್ರಿಗಿರಿಗಾಗಿ ಪೈಪೋಟಿ ಶುರುವಾಗಿದೆ. ಗೆದ್ದ ಅನರ್ಹರಿಗೆ ಖಾತೆ ಕೊಡುತ್ತೇವೆ ಎಂದು ಸಿಎಂ ಈ ಹಿಂದೆ ಹೇಳಿದ್ದು ಬಿಸಿತುಪ್ಪವಾಗಿದೆ.  ಉಪ ಚುನಾವಣೆಯಲ್ಲಿ ಗೆದ್ದ ಅನರ್ಹರಿಗೆಲ್ಲಾ ಒಂದೊಂದು ಖಾತೆ ಕೊಡಲು ಕಷ್ಟಸಾಧ್ಯ. ಈಗ ಇರೋದ್ರಲ್ಲೇ ಖಾತೆ ಹಂಚಿಕೆ ಮಾಡೋದು ಮುಂದಿರೋ ರಿಯಲ್ ಚಾಲೆಂಜ್.

5 ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟು ಎಚ್ಚರಿಕೆ ಸಂದೇಶ ರವಾನೆ

ಆದರೆ  ಇನ್ನೊಂದೆಡೆ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದಕ್ಕೆ ಅರ್ಹ ಶಾಸಕರು ಮುನಿಸಿಕೊಂಡಿದ್ದಾರೆ. ಬಿಎಸ್‌ವೈ ತಮ್ಮನ್ನು ಕೈ ಬಿಟ್ಟರಾ ಎಂಬ ಆತಂಕದಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಅರ್ಹ ಶಾಸಕರು ಎರಡೆರಡು ಗೌಪ್ಯಸಭೆ ನಡೆಸಿದ್ದಾರೆ. ಬಿಜೆಪಿ ಹೈಕಮಾಂಡ್ ಹಾಗೂ ಸಿಎಂ ಯಡಿಯೂರಪ್ಪನವರಿಗೆ ಅರ್ಹ ಶಾಸಕರೆಲ್ಲರೂ ಸಂಪುಟ ವಿಸ್ತರಣೆಗೆ ಗಡುವು ಕೊಟ್ಟಿದ್ದಾರೆ ಎನ್ನಲಾಗಿದೆ. ಏನಿದು ಇನ್‌ಸೈಡ್‌ ಡಿಟೇಲ್ ಸ್ಟೋರಿ? ಕಮಲ ಪಾಳಯದಲ್ಲಿ ಏನೆಲ್ಲಾ ನಡೆಯುತ್ತಿದೆ? ನೋಡಿ ಸುವರ್ಣ ಸ್ಪೆಷಲ್!