ವರುಣಾದಲ್ಲಿ ಸಿದ್ದುಗೆ ಕಾಡ್ತಿದ್ಯಾ“ಲಿಂಗಾಯತ” ಭಯ.. ಲಿಂಗಾಯತರ ಕ್ಷಮೆ ಕೇಳಿದ್ದೇಕೆ ಸಿದ್ದರಾಮಯ್ಯ..?

May 5, 2023, 10:38 AM IST

ಒಬ್ಬರು ರೀಲ್ ಟಗರು.. ಇನ್ನೊಬ್ಬರು ರಿಯಲ್ ಟಗರು.. ವರುಣಾ ರಣರಂಗದಲ್ಲಿ ಟಗರುಗಳ ಸಮಾಗಮವಾಗಿದೆ. ವರುಣಾ ವ್ಯೂಹವನ್ನು ಭೇದಿಸಲು ಹೊರಟಿರುವ ಸಿದ್ದರಾಮಯ್ಯನವರ ಪರ ಗುರುವಾರ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ಅಷ್ಟೇ ಅಲ್ಲದೆ  ನಟಿ ರಮ್ಯಾ, ದುನಿಯಾ ವಿಜಯ್ ಹೀಗೆ ಸ್ಯಾಂಡಲ್‌ ವುಡ್‌ ಸ್ಟಾರ್'ಗಳು ವರುಣಾದಲ್ಲಿ ಸಿದ್ದರಾಮಯ್ಯನವರನ್ನು ಗೆಲ್ಲಿಸಲು ಟೊಂಕ ಕಟ್ಟಿ ನಿಂತಿದೆ. ಆದರೆ ವರುಣಾ ಕ್ಷೇತ್ರದಲ್ಲಿ ಸಿದ್ದು ಗೆಲುವು ಅಂದುಕೊಂಡಷ್ಟು ಸುಲಭವಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಇದಕ್ಕೆ ಒಂದು ಕಾರಣ ಅಖಾಡದಲ್ಲಿ ಲಿಂಗಾಯತ ಸಮುದಾಯದ ಸೋಮಣ್ಣನವರ ಸ್ಪರ್ಧೆ, ಮತ್ತೊಂದು ಕಾರಣ ಲಿಂಗಾಯತ ಸಿಎಂ ವಿಚಾರದಲ್ಲಿ ಸಿದ್ದರಾಮಯ್ಯನವರು ಕೆಲ ದಿನಗಳ ಹಿಂದೆ ನೀಡಿದ್ದ ಹೇಳಿಕೆ. ಇನ್ನು ಸಿದ್ದರಾಮಯ್ಯ  ಕ್ಷಮೆ ಕೇಳುವುದು ತುಂಬಾ ಅಪರೂಪ. ಆಡಿದ ಮಾತನ್ನು "ಹೌದು ಏನೀಗ" ಅಂತ ಸಮರ್ಥಿಸಿಕೊಳ್ಳುತ್ತಾರೆ.  ಆದರೆ ಈಗ  ವರುಣಾ ವಾರ್'ನಲ್ಲಿ ಲಿಂಗಾಯತರಿಗೆ ಕ್ಷಮೆ ಕೇಳಿದ್ದಾರೆ. ಹಾಗಾದರೆ ಸಿದ್ದರಾಮಯ್ಯನವರ ಕ್ಷಮೆಯ ಹಿಂದೆ ಲಿಂಗಾಯತ ಸಮುದಾಯದ  ದೊಡ್ಡ ಮಾಸ್ ಲೀಡರ್ ಯಡಿಯೂರಪ್ಪನವರ ಎಚ್ಚರಿಕೆ ಏನಾದ್ರೂ ಅಡಗಿದ್ಯಾ..? ಬಿಎಸ್‌ವೈ  ಕೊಟ್ಟಿದ್ದ ಅದೊಂದು ಎಚ್ಚರಿಕೆಗೆ ಸಿದ್ದರಾಮಯ್ಯನವರು ಬೆದರಿದ್ರಾ..?  ಈ ವಿಡಿಯೋ ನೋಡಿ