ಪಕ್ಷ ಜವಾಬ್ದಾರಿ ಕೊಟ್ಟ ದಿನದಿಂದ ಮಲಗಿಲ್ಲ:ಡಿ ಕೆ ಶಿವಕುಮಾರ್

May 12, 2023, 4:27 PM IST

ನಾನು ಪಕ್ಷಕ್ಕಾಗಿ ಶ್ರಮ ಪಟ್ಟಿದ್ದೀನಿ, ಜವಾಬ್ದಾರಿ ಕೊಟ್ಟ ದಿನದಿಂದ ಮಲಗಿಲ್ಲ ಎಂದು  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಮಾಧ್ಯಮದ ಜತೆ ಮಾತನಾಡಿದ ಅವರು ನನಗೆ ಜವಾಬ್ದಾರಿ ಕೊಟ್ಟ ದಿನದಿಂದ ನಾನೂ ಮಲಗಿಲ್ಲ ಮಲಗುವುದಕ್ಕೂ ಬಿಟ್ಟಿಲ್ಲ. ದಿನೇಶ್ ಗುಂಡೂರಾವ್ ಆಗಲ್ಲ ಎಂದು ಬಿಟ್ಟಾಗ ನನಗೆ ಜವಾಬ್ದಾರಿ ಕೊಟ್ಟರು ಅಂದಿನಿಂದ  ಪಕ್ಷಕ್ಕಾಗಿ ಜವಾಬ್ದಾರಿಯಿಂದ ದುಡಿಯುತ್ತಿದೆನೆ ಎಂದು ಹೇಳಿದರು. ಇನ್ನು ಈ ಬಾರಿ ನಿಚ್ಚಳವಾದ ಬಹುಮತ ಕಾಂಗ್ರೆಸ್ ಗೆ ಬರುತ್ತದೆ. ಇದು ನನ್ನ ಅಚಲವಾದ ನಂಬಿಕೆ.‌ ಬಿಜೆಪಿಯವರು ಎಷ್ಟೇ ದುಡ್ಡು ಸುರಿದಿರಬಹುದು. ಬಿಜೆಪಿಯ ಎಷ್ಟೇ ದೊಡ್ಡ ದೊಡ್ಡ ನಾಯಕರು ಬಂದು ಪ್ರಚಾರ ಮಾಡಿರಬಹುದು. ಆದರೆ ಬ್ಯಾಲೆಟ್ ಈಸ್ ಸ್ಟ್ರಾಂಗರ್ ದೆನ್ ಬುಲೆಟ್ ಬಿಜೆಪಿ ವಿರುದ್ಧ ಕಿಡಿಕಾರಿದರು ಡಿಕೆಶಿ.