ಕುಮಾರಸ್ವಾಮಿಗೆ ಉತ್ತರ ಕೊಡಲ್ಲ; ಅವರಿಗೂ ನ್ಯೂಸ್‌ ಬೇಕಲ್ಲ ಮಾತಾಡ್ತಾರೆ: ಎಚ್‌ಡಿಕೆ ಆರೋಪಕ್ಕೆ ಡಿಕೆಶಿ ತಿರುಗೇಟು

Jul 18, 2023, 3:47 PM IST

ವಿಪಕ್ಷಗಳ ಸಭೆಗೆ ಐಎಎಸ್‌ ಅಧಿಕಾರಿಗಳನ್ನು ಜೀತದಾಳುಗಳಂತೆ ಬಳಸಲಾಗಿದೆ ಎಂಬ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಆರೋಪಕ್ಕೆ ಉಪ ಮುಖ್ಯಮಂತ್ರಿ ಡಿಕೆಶಿ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿಗೆ ಉತ್ತರ ಕೊಡಲು ಹೋಗಲ್ಲ. ಪ್ರೋಟೋಕಾಲ್‌ನಲ್ಲಿ ಯಾರಿರಬೇಕು ಅವರೇ ಇರ್ತಾರೆ. ಪಾಪ ಕುಮಾರಣ್ಣ ಮಾತಾಡ್ತಾರೆ ಅವರಿಗೂ ನ್ಯೂಸ್‌ ಬೇಕಲ್ಲ ಎಂದು ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ.