Nov 17, 2021, 10:32 PM IST
ಬೆಂಗಳೂರು, (ನ.17): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವಿನ ಬಣ ರಾಜಕೀಯ ಮೊದಲಿನಿಂದಲೂ ಇದೆ. ಅದು ಈಗ ಪಕ್ಷದ ಸಣ್ಣ ಘಟಕಗಳಿಗೂ ವಿಸ್ತರಣೆಯಾಗಿದೆ. ಅಲ್ಪಸಂಖ್ಯಾತ ಸಮುದಾಯದ ನಾಯಕತ್ವಕ್ಕಾಗಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ತನ್ವೀರ್ ಸೇಠ್ ನಡುವೆ ಕೋಲ್ಡ್ ವಾರ್ ನಡೆದಿತ್ತು. ಇದೀಗ ಅದು ಜಮೀರ್ v/s ಹ್ಯಾರಿಸ್ ನಡುವೆ ಕೋಲ್ಡ್ ವಾರ್ ಶುರುವಾಗಿದೆ.
Karnataka Politics; ಸಿದ್ದು ಮಾತನಾಡಬೇಕಿದ್ದರೆ ಡಿಕೆ ಡಿಕೆ ಘೋಷಣೆ ಕೂಗಿಸಿದ್ದು ಯಾರು?
ಹೌದು..ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನೇಮಕ ವಿಚಾರದಲ್ಲಿ ಜಮೀರ್ ಅವರನ್ನ ಕಡೆಗಣಿಸಲಾಗಿದೆ. ಈ ಹಿನ್ನೆಲೆಲ್ಲಿ ಆಕ್ರೋಶಗೊಂಡಿರುವ ಜಮೀರ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಅಲ್ಲದೇ ದಿಲ್ಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಿದ್ದು ಭಾರೀ ಕುತೂಹಲ ಮೂಡಿಸಿದೆ.