ಬಿಜೆಪಿಯಲ್ಲಿ ಪಿಂಪ್‌ ರವಿಗಳೇ ತುಂಬಿಕೊಂಡಿದ್ದಾರೆ: ಬಿ.ಕೆ.ಹರಿಪ್ರಸಾದ್‌ ತಿರುಗೇಟು

Jan 18, 2023, 2:44 PM IST

ಬೆಂಗಳೂರು (ಜ.18): ಬಿಜೆಪಿಯಲ್ಲಿ ಪಿಂಪ್‌ ರವಿಗಳೇ ತುಂಬಿಕೊಂಡಿದ್ದಾರೆ, ಸಿ.ಟಿ ರವಿ, ಸ್ಯಾಂಟ್ರೋ ರವಿ,  ಫೈಟರ್‌ ರವಿ.... ಅಂತವರೇ ತುಂಬಿ ತುಳುಕಾಡುತ್ತಿದ್ದಾರೆ. ಮಂತ್ರಿಗಳಾಗಲು ಏನೆಲ್ಲಾ ಸಪ್ಲೈ ಮಾಡಿದ್ದಾರೆ. ಅದನ್ನೆಲ್ಲ ಹೇಳಿ ಬಾಯಿ ಹೊಲಸು ಮಾಡಿಕೊಳ್ಳಲ್ಲ ಎಂದು ಸಚಿವ ಮುನಿರತ್ನಗೆ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್‌ ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿ ಶಾಸಕರ ರೀತಿಯಲ್ಲಿ ನಾನು ಹಣಕ್ಕೋಸ್ಕರ ಹಾಗೂ ಅಧಿಕಾರಕ್ಕೋಸ್ಕರ ರಾಜಕೀಯ ಮಾಡಿದವನಲ್ಲ. ವಿದ್ಯಾರ್ಥಿ ದೆಸೆಯಿಂದಲೂ ಸಹ ಒಂದು ಸಿದ್ದಾಂತದ ಬಗ್ಗೆ, ನಾಯಕತ್ವದ ಬಗ್ಗೆ ನಂಬಿಕೆ ಇಟ್ಟುಕೊಂಡು ರಾಜಕಾರಣ ಮಾಡಿದ್ದೀನಿ. ಅಲ್ಲದೇ ನಾನು ಪಕ್ಷವನ್ನು ಬದಲಾವಣೆ ಮಾಡಿದವನಲ್ಲ, ಸಿದ್ದಾಂತದಲ್ಲಿ ಬದಲಾವಣೆ ಮಾಡಿಲ್ಲ. ಬಿಜೆಪಿಯವರ ತರಹ ಹೋದ ಕಡೆಯಲೆಲ್ಲಾ ರಾಜಕೀಯ ಗೊಸುಂಬೆ ರೀತಿ ಬಣ್ಣ ಬದಲಾವಣೆ ಮಾಡಿದವನಲ್ಲ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.