BJPಯಲ್ಲಿ 'ಕುಟುಂಬ' ಟೆನ್ಶನ್! ಮಕ್ಕಳಿಗೆ ಟಿಕೆಟ್‌ ಕೊಡುವಂತೆ ಹಿರಿಯ ನಾಯಕರ ಡಿಮ್ಯಾಂಡ್!

Jul 14, 2023, 11:51 PM IST

ಬೆಂಗಳೂರು (ಜು.14): ಬಿಜೆಪಿಗೆ ಒಂದೆಡೆ ವಿಧಾನಸಭೆಯ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದರ ನಡುವೆಯೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲಬೇಕು ಎನ್ನುವ ಗುರಿ ಇರಿಸಿಕೊಂಡಿದೆ. ಈ ನಡುವೆ ಬಿಜೆಪಿಯ ಕೆಲ ನಾಯಕರು ಲೋಕಸಭಾ ಚುನಾವಣೆಗೆ ತಮ್ಮ ಕುಟುಂಬದವರಿಗೆ ಟಿಕೆಟ್‌ ನೀಡಬೇಕು ಎಂದು ಪಟ್ಟು ಹಿಡಿಸಿದ್ದಾರೆ.

News Hour: ಚಂದ್ರನೂರಿಗೆ ಭಾರತದ ತೇರು, ಇನ್ನೇನಿದ್ದರು ಗಮನ ಆಗಸ್ಟ್‌ 23!

ಹಿರಿಯ ಬಿಜೆಪಿ ನಾಯಕ ಕೆಎಸ್‌ ಈಶ್ವರಪ್ಪ ತಮ್ಮ ಪುತ್ರ ಕೆಇ ಕಾಂತೇಶ್‌ ಅವರ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರೆ, ಎಸ್‌ಆರ್‌ ವಿಶ್ವನಾಥ್‌ ತಮ್ಮ ಪುತ್ರ ಅಲೋಕ್‌ ವಿಶ್ವನಾಥ್‌ಗೆ ಚಿಕ್ಕಬಳ್ಳಾಪುರದಿಂದ ಟಿಕೆಟ್‌ ಬೇಡಿಕೆ ಇರಿಸಿದ್ದಾರೆ. ಕಾಂತೇಶ್‌ ಹಾವೇರಿ ಅಥವಾ ಗದಗದಿಂದ ಟಿಕೆಟ್‌ ಬೇಡಿಕೆ ಇರಿಸಿದ್ದಾರೆ ಎನ್ನಲಾಗಿದೆ.