ಪುಂಡರ ಬೆನ್ನಿಗೆ ನಿಂತ ಇಮ್ರಾನ್‌ ಪಾಷಾ: ಗಲಭೆಯಲ್ಲಿ ಸತ್ತವರ ಕುಟುಂಬಗಳಿಗೆ ಪರಿಹಾರ ಘೋಷಣೆ..!

Aug 22, 2020, 7:07 PM IST

ಬೆಂಗಳೂರು, (ಆ.22):  ಬೆಂಗಳೂರು ನಗರದ ಕೆ. ಜಿ ಹಳ್ಳಿ ಮತ್ತು ಡಿ.ಜೆ ಗಲಭೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಪೊಲೀಸ್ ಠಾಣೆ, ಎಮ್‌ಎಲ್‌ಎ ಮನೆ ಸೇರಿದಂತೆ ರಸ್ತೆಯಲ್ಲಿ ನಿಂತಿದ್ದ ವಾಹನಗಳಿಗೆ ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ. 

ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲಿನ ದಾಳಿಯ ಭೀಕರ ದೃಶ್ಯ ಲಭ್ಯ!

ಆದ್ರೆ, ಇದೀಗ ಗಲಭೆ ವೇಳೆ ಪೊಲೀಸರ ಮಾಡಿದ ಫೈರಿಂಗ್‌ನಲ್ಲಿ ಮೃತಪಟ್ಟ ಪುಂಡರ ಬೆನ್ನಿಗೆ ಪಾದರಾಯನಪುರ ಪಾಲಿಕೆ ಸದಸ್ಯೆ ಇಮ್ರಾನ್‌ ಪಾಷಾ ನಿಂತಿದ್ದಾರೆ. ಅಲ್ಲದೇ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.