ಸ್ವಸ್ಥಾನಕ್ಕೆ ಮರಳಿದ್ದಾನೆ ಗುರು; ಅಂದುಕೊಂಡ ಕೆಲಸಗಳೆಲ್ಲವೂ ಸುಸೂತ್ರ, ಸರಾಗ

Jun 29, 2020, 8:32 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲ ಹೀಗಿದೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲಪಕ್ಷ, ನವಮಿ ತಿಥಿ, ಹಸ್ತ ನಕ್ಷತ್ರ. ಇಂದು ಪ್ರಶಸ್ತವಾದ ದಿನ. ನೀಚ ಸ್ಥಾನದಲ್ಲಿದ್ದ ಗುರು ತನ್ನ ಸ್ವಸ್ಥಾನಕ್ಕೆ ಮರಳುತ್ತಿದ್ದಾನೆ. ಪೂರ್ಣ ಫಲಗಳನ್ನು ನೀಡಲು ಗುರು ಯೋಗ್ಯನಾಗಿದ್ದಾನೆ. ಗುರು ಬಲ ಇಲ್ಲದೇ ನಿಂತು ಹೋಗಿದ್ದ ಮಂಗಳ ಕಾರ್ಯಗಳು ನಡೆಯುತ್ತದೆ. ತನ್ಮೂಲಕ ಜನರಿಗೂ ಗುರು ಬಲವನ್ನು ತುಂಬುತ್ತಾನೆ. ಎಲ್ಲೂ ಒಳ್ಳೆಯದಾಗುವ ಕಾಲ ಬಂದಿದೆ. ಇಂದಿನ ಪಂಚಾಂಗ ಫಲಗಳು ಹೀಗಿವೆ ನೋಡಿ.!