ಪಂಚಾಂಗ : ಇಂದು ಶನೈಶ್ಚರನಿಗೆ ತಿಲತೈಲ ದೀಪ ಬೆಳಗಿದರೆ ದುಃಖಗಳು ದೂರವಾಗುವವು

Nov 28, 2020, 8:28 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾನಯ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಭರಣಿ ನಕ್ಷತ್ರ. ಇಂದು ಶನಿವಾರವಾಗಿದ್ದು ಭರಣಿ ನಕ್ಷತ್ರ ಬಂದಿದ್ದು ಬಹಳ ಪ್ರಶಸ್ತ.

ದಿನ ಭವಿಷ್ಯ : ಈ ರಾಶಿಯವರಿಗೆ ಅನುಕೂಲದ ದಿನ, ಹಂಚ ಯೋಗದ ಫಲವಿದೆ!

ಭರಣಿ ನಕ್ಷತ್ರ ಯಮನ ನಕ್ಷತ್ರ, ಶನಿವಾರ ಶನೈಶ್ಚರನ ವಾರ. ಇಬ್ಬರೂ ಸಹೋದರರು. ಪಿತೃಕಾರ್ಯಗಳನ್ನು ಮಾಡುವುದರಿಂದ, ತಿಲತೈಲ ದೀಪ ಹಚ್ಚುವುದರಿಂದ ದುಃಖ ದೂರವಾಗುತ್ತದೆ. ಮನಸ್ಸಿಗೆ ಸಮಾಧಾನ ಸಿಗುತ್ತದೆ. ಇನ್ನುಳಿದಂತೆ ವೀಕ್ಷಕರು ಕಳುಹಿಸಿರುವ ಸಂದೇಶಗಳು, ಅವುಗಳಿಗೆ ಪರಿಹಾರ ಹೀಗಿವೆ.