Sep 17, 2020, 8:28 AM IST
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಪುಬ್ಬ ನಕ್ಷತ್ರ. ಇಂದು ಮಹಾಲಯ ಅಮಾವಾಸ್ಯೆ. ದಕ್ಷಿಣಾಯನದ ಮಧ್ಯಕಾಲ ಇದು. ಈ ಕಾಲದಲ್ಲಿ ಪಿತೃದೇವತೆಗಳು ನಮ್ಮನ್ನು ಹರಸಲು ಭೂಮಿಗೆ ಬರ್ತಾರೆ ಅಂತ ನಂಬಿಕೆ ಇದೆ. ಇವರ ಕಾರ್ಯಗಳನ್ನು ಮಾಡುವುದರಿಂದ ಅವರು ಸಂಪ್ರೀತರಾಗಿ ನಮ್ಮನ್ನು ಹರಸಿ ಹೋಗುತ್ತಾರೆ. ಹಾಗಾಗಿ ಇಂದು ಶ್ರಾದ್ಧಾದಿಗಳನ್ನು ಮಾಡಲು, ಕಾರ್ಯಗಳನ್ನು ಮಾಡಲು ಪ್ರಶಸ್ತವಾದ ದಿನ. ಮಹಾಲಯ ಅಮಾವಾಸ್ಯೆಯ ಮಹತ್ವ, ವಿಧಾನಗಳ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.