ಇಂದು ಈಶ್ವರನಿಗೆ ಬಿಲ್ವಪತ್ರೆಯಿಂದ ಪೂಜಿಸಿದರೆ ಶುಭಫಲ

Jun 15, 2020, 8:40 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ. ಇಂದು ರವಿ ಸ್ಥಾನ ಬದಲಾವಣೆ ಮಾಡುತ್ತಿದ್ದಾನೆ. ಸೂರ್ಯನ ಪ್ರಾರ್ಥನೆ ಮಾಡುವದರಿಂದ ಅವನ ಅನುಗ್ರಹಕ್ಕೆ ಪಾತ್ರರಾಗಬಹುದು. ರವಿಗೆ ಗುರು ಎಂದರೆ ಪರಮೇಶ್ವರ. ಇಂದು ಸೋಮವಾರವಾಗಿರುವುದರಿಂದ ಈಶ್ವರನಿಗೆ ಪ್ರಿಯವಾದ ವಾರ. ಈಶ್ವರನಿಗೆ ಪ್ರಿಯವಾದ ಬಿಲ್ವಪತ್ರೆಯಿಂದ ಪೂಜಿಸಿದರೆ ನಮ್ಮ ಸಂಕಲ್ಪಗಳು ಈಡೇರುವವು. ಇಂದಿನ ಪಂಚಾಂಗ ಫಲಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!