ಪಂಚಾಂಗ: ಇಂದು ಸೋಮೇಶ್ವರನನ್ನು ಆರಾಧಿಸಿದರೆ ವಿಶೇಷ ಫಲ ನಿಮ್ಮದಾಗುತ್ತದೆ

Jul 6, 2020, 8:23 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣಪಕ್ಷ, ಪ್ರತಿಪತ್ ತಿಥಿ, ಉತ್ತರಾಷಾಢ ನಕ್ಷತ್ರ. ಇಂದು ಸೋಮವಾರವಾಗಿದ್ದು, ಪರಮೇಶ್ವರ ಹಾಗೂ ಚಂದ್ರನನ್ನು ಆರಾಧಿಸಿದರೆ ಶುಭ ಫಲ ಸಿಗುತ್ತದೆ. ಪರಮೇಶ್ವರನನ್ನು ಪೂಜಿಸಿದರೆ ಚಂದ್ರನನ್ನು ಪೂಜಿಸಿದಂತಾಗುತ್ತದೆ. ಆದರೂ ಚಂದ್ರನ ಅಧಿದೇವತೆಯಾಗಿರುವ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರೆ ವಿಶೇಷ ಫಲ ಸಿಗುತ್ತದೆ. ಇಂದಿನ ಪಂಚಾಂಗ ಫಲಗಳ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!