ಸಿಎಂ ಕುಮಾರಸ್ವಾಮಿ ವಿರುದ್ಧ ಗುಡುಗಿದ ಸುನಿತಾ ಪುಟ್ಟಣ್ಣಯ್ಯ!

May 30, 2019, 1:01 PM IST

ಮಂಡ್ಯ[ಮೇ.30]: ಸಿಎಂ ಕುಮಾರಸ್ವಾಮಿ ವಿರುದ್ಧ ರಾಜಕೀಯ ಮುಖಂಡರು ವಾಗ್ದಾಳಿ ನಡೆಸುತ್ತಿರುವುದು ಹೊಸದೇನಲ್ಲ. ಆದರೀಗ ರೈತ ಸಂಘದ ಸುನಿತಾ ಪುಟ್ಟಣ್ಣಯ್ಯ ಎಚ್ ಡಿಕೆ ವಿರುದ್ಧ ಗುಡುಗಿದ್ದಾರೆ. ಜಾತಿ ಅಲೆ , ಹಣದ ಅಲೆ ಯನ್ನ ಹರಿಸಿ ಕುಮಾರಸ್ವಾಮಿ ನನ್ನ ಮಗನನ್ನ ಸೋಲಿಸಿದ್ರು, ಸುಳ್ಳು ಭರವಸೆಗಳನ್ನು ನೀಡಿ ನನ್ನ ಮಗನನ್ನ ಸೋಲಿಸಿದ್ರು. ವೃದ್ಧಾಪ್ಯ ವೇತನ , ಶ್ರೀಶಕ್ತಿ ಸಂಘಗಳ ಬಗ್ಗೆ ಸುಳ್ಳು ಭರವಸೆಗಳನ್ನ ನೀಡಿ ನನ್ನ ಮಗನನ್ನ ಸೋಲಿಸಿದ್ರು. ಆದ್ರೆ ಈ ಚುನಾವಣೆಯಲ್ಲಿ ಮಂಡ್ಯ ಜನ ಅವರಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಸುಮಲತಾ ದಿಟ್ಟ ಮಹಿಳೆ, ಭಾಷ ಜ್ನಾನವಿದೆ ಆಗಾಗಿ ಅವರ ಗೆಲುವು ನಮಗೆ ಖುಷಿ ಕೊಟ್ಟಿದೆ. ಮಂಡ್ಯ ಜಿಲ್ಲೆಯ ಗತ್ತನ್ನ ಇಂಡಿಯಾದಲ್ಲಿ ಈ ಚುನಾವಣೆ ತೋರಿಸಿದೆ. ಬೆಳೆಗಳಿಗೇ ನೀರು ಸಾಲುತ್ತಿಲ್ಲ ಅಂತಹದರಲ್ಲಿ ತಮಿಳುನಾಡಿಗೆ ಕಾವೇರಿ ನೀರು ಕೊಡುವುದು ಎಲ್ಲಿ? ಸುಮಲತಾಗೆ ಕಾವೇರಿ ವಿಷಯದಲ್ಲಿ ಕೆಲವು ಮಂತ್ರಿಗಳು ಚಲೆಂಜ್ ಹಾಕಿದ್ದರು. ಕುಮಾರಸ್ವಾಮಿಯವರ  ಮಂತ್ರಿಗಳು ಎಲ್ಲಿ ಹೋಗಿದ್ರು ಇಲ್ಲಿವರೆಗೆ ಯಾಕೆ ಕೆಲಸ ಮಾಡಿಲ್ಲ' ಎಂದು ಪ್ರಶ್ನಿಸಿದ್ದಾರೆ.