ಬಿಜೆಪಿ ಸೇರ್ಪಡೆ ಇಲ್ಲ, ಆದರೆ...?: ರಾಜಕೀಯ ನಡೆ ಬಿಚ್ಚಿಟ್ಟ ಸುಮಲತಾ!

May 26, 2019, 2:19 PM IST

ಮಂಡ್ಯ[ಮೇ.26]: ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭೇಟಿ ಭಾರೀ ಕುತೂಹಲ ಮೂಡಿಸಿತ್ತು. ಸುಮಲತಾ ಬಿಜೆಪಿ ಸೇರ್ಪಡೆಯಾಗ್ತರಾ ಎಂಬ ಅನುಮಾನಗಳು ಎದ್ದಿದ್ದವು. ಆದರೀಗ ಈ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ. ಭೇಟಿ ಬಳಿಕ ಮಾತನಾಡಿರುವ 'ಬಿಜೆಪಿ ಸೇರ್ಪಡೆ ಕುರಿತು ಯಾವುದೇ ನಿರ್ಧಾರ ಇಲ್ಲ. ಆದರೆ, ಬಿಜೆಪಿಗೆ ವಿಷಯಾಧಾರಿತ ಬೆಂಬಲ ನೀಡುವೆ. ಪಕ್ಷೇತರ ಅಭ್ಯರ್ಥಿ ಯಾವುದೇ ಪಕ್ಷ ಸೇರುವುದು ಸಾಧ್ಯವಿಲ್ಲ. ಆದರೆ, ಚುನಾವಣೆಯಲ್ಲಿ ಬಿಜೆಪಿ ನನಗೆ ಬೇಷರತ್ ಬೆಂಬಲ ನೀಡಿತ್ತು. ಹೀಗಾಗಿ, ಬಿಜೆಪಿಗೆ ವಿಷಯಾಧಾರಿತ ನೀಡಬಹುದು. ಬಿಜೆಪಿ ಸೇರ್ಪಡೆಗೆ ಜನಾಭಿಪ್ರಾಯ ಮುಖ್ಯ. ನನ್ನ ಗೆಲುವಿಗೆ ಕೆಲಸ ಮಾಡಿದ ಜನರು, ಕಾರ್ಯಕರ್ತರಿಂದ ಅಭಿಪ್ರಾಯ ಕೇಳುವೆ, ಸದ್ಯ, ಮಂಡ್ಯ ಜಿಲ್ಲೆಯ ಅಭಿವೃದ್ಧಿ ಬಗ್ಗೆಯಷ್ಟೇ ನನ್ನ ಗಮನ' ಎಂದಿದ್ದಾರೆ.