ಗಾಯದ ಮೇಲೆ ಬರೆ: ರಾಜ್ಯದಲ್ಲಿ ಮತ್ತೆ ಭಾರೀ ಮಳೆ

Oct 6, 2019, 6:59 PM IST

ಬೆಂಗಳೂರು (ಅ.06): ಕಳೆದ ಆಗಸ್ಟ್- ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಯು ಸೃಷ್ಟಿಸಿದ ಅವಾಂತರದಿಂದ ರಾಜ್ಯದ ಜನ ಇನ್ನೂ ಹೊರಬಂದಿಲ್ಲ.

ಅದರ ಬೆನ್ನಲ್ಲೇ ಮಳೆ ಮತ್ತೊಮ್ಮೆ ಶುರುವಾಗಿದೆ. ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆಯು, ದಸರಾ ಸಂಭ್ರಮದ ಮೂಡ್‌ನಲ್ಲಿರುವ ಜನರನ್ನು ಆತಂಕಕ್ಕೆ ದೂಡಿದೆ.

ಗದಗ, ಹಾವೇರಿ, ಕೊಪ್ಪಳ, ಶಿವಮೊಗ್ಗ, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿದೆ ಇನ್ನಷ್ಟು ಮಾಹಿತಿ....