ಡಿಕೆಶಿ ಪರ ಬೃಹತ್ ರ‍್ಯಾಲಿಗೆ ಕೈ ಜೋಡಿಸಿದ ಕರವೇ ಅಧ್ಯಕ್ಷ ನಾರಾಯಣಗೌಡ!

Sep 11, 2019, 10:59 AM IST

ಬೆಂಗಳೂರು[ಸೆ.11]: ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ಬಂಧನ ಖಂಡಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ವಿವಿಧ ಜಿಲ್ಲೆಗಳಿಂದ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಆಗಮಿಸುತ್ತಿದ್ದು, ರಾಜ್ಯ ರಜಧಾನಿಯಲ್ಲಿ ಟ್ರಾಫಿಕ್ ಜಾಮ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯ ಈ ಬೃಹತ್ ರ‍್ಯಾಲಿಗೆ ಕರವೇ ಅಧ್ಯಕ್ಷ ನಾರಾಯಣಗೌಡ ಸಾಥ್ ನೀಡಿದ್ದಾರೆ. ಇನ್ನು ಅವರ ಬೆಂಬಲಿಗರಲ್ಲಿ ಒಕ್ಕಲಿಗರ ಸಭೆಗೆ ಕರವೇ ಸಾಥ್ ನೀಡುತ್ತಾ ಎಂದು ಪ್ರಶ್ನಿಸಿದಾಗ ಸ್ಪಷ್ಟನೆ ನೀಡಿದ್ದು, ನಾರಾಯಣಗೌಡ ಓರ್ವ ಒಕ್ಕಲಿಗ. ರ‍್ಯಾಲಿಯಲ್ಲಿ ಅವರು ಓರ್ವ ಒಕ್ಕಲಿಗ ನಾಯಕನಾಗಿ ಭಾಗವಹಿಸುತ್ತಾರೆ ಹೊರತು ಕರವೇ ಅಧ್ಯಕ್ಷರಾಗಿ ಅಲ್ಲ ಎಂದಿದ್ದಾರೆ.