ಅನರ್ಹರಿಗೆ ಮತ್ತೊಂದು ಶಾಕ್ ನೀಡಲು ಮುಂದಾದ ಕಾಂಗ್ರೆಸ್!

Aug 1, 2019, 2:09 PM IST

ಬೆಂಗಳೂರು (ಜು.01): ರಾಜೀನಾಮೆ ಕೊಟ್ಟು ಸರ್ಕಾರ ಪತನಕ್ಕೆ ಕಾರಣರಾದ 17 ಶಾಸಕರನ್ನು ಸ್ಪೀಕರ್ ಈಗಾಗಲೇ ಅನರ್ಹಗೊಳಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗಿದ್ದು, ಸಚಿವ ಸಂಪುಟ ರಚನೆಯ ಕಸರತ್ತುಗಳು ನಡೆಯುತ್ತಿವೆ. ಇನ್ನೊಂದು ಕಡೆ ಅನರ್ಹ ಶಾಸಕರಿಗೆ ಮತ್ತೊಂದು ಪಾಠ ಕಲಿಸಲು ಕಾಂಗ್ರೆಸ್ ಮುಂದಾಗಿದೆ.