May 1, 2020, 6:56 PM IST
ಮಂಡ್ಯ(ಮೇ.01): ಮುಂಬೈನಿಂದ ಬಂದ ಮೃತ ದೇಹ ಇಡೀ ಮಂಡ್ಯ ಜನರ ನಿದ್ದೆಗೆಡಿಸಿದೆ. ಇನ್ನೇನು ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ನಿಟ್ಟುಸಿರುವ ಬಿಡುತ್ತಿರುವಾಗಲೇ ಇದೀಗ ಮತ್ತೊಂದು ಆತಂಕ ಎದುರಾಗಿದೆ.
ಪಾಂಡವಪುರ ತಾಲೂಕಿನ ಕೊಡಗಳ್ಳಿಯಲ್ಲಿ ಮುಂಬೈನಿಂದ ಬಂದಂತಹ ದೇಹವನ್ನು ಅಂತ್ಯಕ್ರಿಯೆ ಮಾಡಲಾಗಿದೆ. ಮೃತದೇಹದ ಜತೆ ಬಂದವರಿಗೂ ಕೊರೋನಾ ಸೋಂಕು ತಗುಲಿರಬಹುದು ಎನ್ನುವ ಭೀತಿ ಶುರುವಾಗಿದೆ. ಗ್ರಾಮಸ್ಥರು ಆತಂಕದಲ್ಲಿ ಕಾಲಕಳೆಯುವಂತಾಗಿದೆ.
ಕೊರೋನಾ ಆತಂಕ: ಮಂಡ್ಯ ಜಿಲ್ಲಾಡಳಿತದ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ ಗರಂ
ಮುಂಬೈನಿಂದ ಮಂಡ್ಯಕ್ಕೆ ಮೃತದೇಹ ತರಲು ಅನುಮತಿ ಕೊಟ್ಟಿದ್ದು ಯಾರು? ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ರಾ ಎನ್ನುವ ಅನುಮಾನಗಳು ದಟ್ಟವಾಗತೊಡಗಿದೆ. ಈ ಬಗ್ಗೆ ಮಾಜಿ ಸಚಿವ ಹಾಗೂ ಹಾಲಿ ಪಾಂಡವಪುರ ಶಾಸಕ ಸಿ. ಎಸ್. ಪುಟ್ಟರಾಜು ಸುವರ್ಣ ನ್ಯೂಸ್ ಜತೆ ಮಾತಾಡಿದ್ದಾರೆ ಕೇಳಿ..