ಖಾದರ್‌ಗೆ ತಲೆಬಾಗಲ್ಲ ಸ್ಪೀಕರ್‌ ಸ್ಥಾನಕ್ಕೆ ಗೌರವ ಕೊಡ್ತೀವಿ: ರೇಣುಕಾಚಾರ್ಯ

Nov 17, 2023, 3:43 PM IST

ಸ್ಪೀಕರ್‌ ಹುದ್ದೆಗೂ ಸಚಿವ ಜಮೀರ್‌ ಅಹ್ಮದ್‌(Zameer Ahmed) ಧರ್ಮದ ಲೇಪನ ಹಚ್ಚಿದ್ದಾರೆ. ಮುಸ್ಲಿಂ ಸ್ಪೀಕರ್‌(Speaker) ಮುಂದೆ ಬಿಜೆಪಿಯವರು(BJP) ನಮಸ್ಕಾರ ಸಾಬ್‌ ಅಂತ ನಿಲ್ಲಬೇಕು. ಕೈ ಮುಗಿದು ನಿಲ್ಲುವಂತೆ ಮಾಡಿದ್ದು ಕಾಂಗ್ರೆಸ್‌(Congress) ಎಂದು ಹೇಳಿದ್ದಾರೆ. ಈ ಮೂಲಕ ಸ್ಪೀಕರ್‌ ಹುದ್ದೆಗೂ ಧರ್ಮದ ಲೇಪನವನ್ನು ಹಚ್ಚಿದ್ದಾರೆ. ತೆಲಂಗಾಣದಲ್ಲಿ ಪ್ರಚಾರ ಮಾಡುವಾಗ ಈ ರೀತಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಎಂ.ಪಿ. ರೇಣುಕಾಚಾರ್ಯ(Renukacharya) ತಿರುಗೇಟು ನೀಡಿದ್ದಾರೆ. ಎಲುಬಿಲ್ಲದ ನಾಲಿಗೆ ಏನೇನೋ ಮಾತಾಡೋದಲ್ಲ. ಖಾದರ್‌ಗೆ ತಲೆಬಾಗಲ್ಲ ಸ್ಪೀಕರ್‌ ಸ್ಥಾನಕ್ಕೆ ಗೌರವ ಕೊಡ್ತೀವಿ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ನಿಮ್ಮ ಬಾಯಿಯಿಂದ ಬರುವ ಮಾತಿನಿಂದ ಕೋಮು ಘರ್ಷಣೆ ಉಂಟಾಗುತ್ತದೆ ಎಂದು ಕಿಡಿಕಾರಿದ್ದಾರೆ. 

ಇದನ್ನೂ ವೀಕ್ಷಿಸಿ:  ಸ್ಥಳ ಮಹಜರಿಗೆ ಬಂದಾಗ ಹೈಡ್ರಾಮ..! ಅವನನ್ನ ನಮಗೆ ಒಪ್ಪಿಸಿ ಎಂದ ಉಡುಪಿ ಜನರು..!