ಕರಾವಳಿ ದೈವಗಳ‌ ಕಾರಣಿಕ : ಕಿನ್ನಿಗೋಳಿಯ ಬಳ್ಕುಂಜೆಯಲ್ಲೊಂದು ವಿಸ್ಮಯ

Mar 11, 2021, 9:32 AM IST

ಮಂಗಳೂರು (ಮಾ.11):  ಕರಾವಳಿಯಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತಿದೆ ದೈವಗಳ‌ ಕಾರಣಿಕ. ಮುಚ್ಚಿ ಹೋದ ಬಾವಿಯಲ್ಲಿ ಪತ್ತೆಯಾಯಿತು 300 ವರ್ಷಗಳ ಹಿಂದಿನ ದೈವಗಳ ಪರಿಕರ. ಜೀರ್ಣೋದ್ಧಾರ ಸಂದರ್ಭ ಸತ್ಯವಾಯಿತು ದೈವ ಕೊಟ್ಟಿದ್ದ ನುಡಿ. ಕಾಲಾಂತರದಲ್ಲಿ ಅಜೀರ್ಣಗೊಂಡಿದ್ದ ದೇವಸ್ಥಾನ ಇದೀಗ ಜೀರ್ಣೋದ್ಧಾರದ ಮ‌ೂಲಕ ಬೆಳಕಿಗೆ ಬಂದಿದೆ. 

ಕೊರಗಜ್ಜನ ನಂಬ್ರಿ ಕಷ್ಟವೆಲ್ಲ ದೂರು ಆಗುತೈತಿ; ಸ್ವಾಮಿ ಶಕ್ತಿಯಲ್ಲಿ ನಡೆದ ಪವಾಡಗಳಿವು!

ಮಂಗಳೂರು ನಗರ ಹೊರವಲಯದ ಕಿನ್ನಿಗೋಳಿಯ ಬಳ್ಕುಂಜೆಯಲ್ಲಿ ವಿಸ್ಮಯ ನಡೆದಿದ್ದು, ಬಳ್ಕುಂಜೆಯ ಮೂಡಾಯಿಗುತ್ತು ಮನೆಯ ಬಾವಿಯಲ್ಲಿ ದೈವಗಳ ಪರಿಕರ ಪತ್ತೆಯಾಗಿದೆ.