Nov 21, 2019, 10:03 PM IST
ಬೆಂಗಳೂರು[ನ. 21] ಯೋಗೇಶ್ ಗೌಡ ಹತ್ಯೆ ಪ್ರಕರಣದ ತನಿಖೆಗೆ ಹೈ ಕೋರ್ಟ್ ತಡೆ ನೀಡಿದೆ. 2016 ರಲ್ಲಿ ನಡೆದ ಹತ್ಯೆ ಇಡೀ ರಾಜ್ಯದ ರಾಜಕಾರಣದ ವಲಯದಲ್ಲಿಯೂ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತ್ತು.
2019 ರ ಸಪ್ಟೆಂಬರ್ ನಿಂದ ಸಿಬಿಐ ತನಿಖೆಗೆ ಸರ್ಕಾರ ಆದೇಶ ಮಾಡಿತ್ತು. ಆದರೆ ಈಗ ಸಿಬಿಐ ತನಿಖೆಗೆ ನ್ಯಾಐಆಲಯ ತಡೆ ನೀಡಿದ್ದು ಮುಂದೇನಾಗುತ್ತದೆ ನೋಡಬೇಕಿದೆ. ಆದೇಶ ರದ್ದುಕೋರಿ ಮೊದಲ ಆರೋಪಿ ಬಸವರಾಜ ಶಿವಪ್ಪ ಮುತ್ತಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. 2016ರ ಜೂನ್ 15ರಂದು ಯೋಗೀಶ ಗೌಡರ ಹತ್ಯೆಯಾಗಿತ್ತು. ಬಿಜೆಪಿಯ ಪ್ರತಿನಿಧಿಯಾಗಿದ್ದ ಅವರು ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು.