Aug 9, 2019, 6:37 PM IST
ಬೆಳಗಾವಿ (ಆ.09): ಬಾನಿಂದಲೂ ನೀರು, ಕಣ್ಣ ಮುಂದೆಯೂ ನೀರು, ಕಣ್ಣಿನ ಒಳಗೂ ನೀರು...ಇದು ಪ್ರವಾಹ ಪೀಡಿತ ಜಿಲ್ಲೆಗಳ ಜನರ ಕಣ್ಣೀರ ಕಥೆ. ಒಂದು ಕಡೆ ಮಾನವ ಜೀವಗಳನ್ನು ಉಳಿಸುವ ಹೋರಾಟ, ಇನ್ನೊಂದು ಕಡೆ ಜಾನುವಾರುಗಳ ಜೀವ ಉಳಿಸುವ ಚಿಂತೆ. ತಾನೊಬ್ಬಳೇ ಬದುಕಿದರೆ ಸಾಲದು, ಸಾಕಿದ ಜಾನುವಾರುಗಳ ಕಥೆಯೇನು? ಮೇವು ಸಿಗದಕ್ಕೆ ಪರಿಹಾರ ಕೇಂದ್ರದಲ್ಲಿ ಅಜ್ಜಿಯೊಬ್ಬರು ಕಣ್ಣೀರು ಹಾಕಿದ್ದಾರೆ.