ಹೆಸರಿಗೆ ಜಿಲ್ಲಾ ಉಸ್ತುವಾರಿ, ನೆರೆ ಬಂದ್ರೂ ರಾಯಚೂರಿಗೆ ಬಾರದ ಲಕ್ಷ್ಮಣ ಸವದಿ!

Oct 17, 2020, 2:54 PM IST

ರಾಯಚೂರು(ಅ.17): ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಭೀಕರ ಪ್ರವಾಹದಿಂದ ಮುಳುಗಿ ಹೋಗುತ್ತಿವೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರಿಗೆ ಮಾತ್ರ ಇದಕ್ಕೂ ತಮಗೂ ಸಂಬಂಧವಿಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ. 

ಭೀಮಾ ನದಿ ಪ್ರವಾಹದಲ್ಲಿ ಈಜಿ ಆಂಜನೇಯನಿಗೆ ಪೂಜೆ ಸಲ್ಲಿಸಿದ ಅರ್ಚಕ

ಹೌದು, ಭೀಕರ ಪ್ರವಾಹಕ್ಕೆ ಸಿಲುಕಿ ಜಿಲ್ಲೆಯ ಜನರು ಪಡಬಾರದ ಸಂಕಷ್ಟಗಳನ್ನ ಎದುರಿಸುತ್ತಿದ್ದಾರೆ. ಆದರೆ, ಸಚಿವ ಲಕ್ಷ್ಮಣ ಸವದಿ ಇತ್ತ ಕಡೆ ಸುಳಿಯುತ್ತಿಲ್ಲ. ಕಳೆದ ಮೂರು ತಿಂಗಳಿಂದ ಜಿಲ್ಲೆಗೆ ಆಗಮಿಸಿಯೇ ಇಲ್ಲ ಎಂದು ಇಲ್ಲಿನ ಜನರು ಅರೋಪಿಸಿದ್ದಾರೆ. ಸಚಿವರ ನಡೆಗೆ ಜಿಲ್ಲಾದ್ಯಂತ ಭಾರೀ ಅಕ್ರೋಶ ವ್ಯಕ್ತವಾಗುತ್ತಿದೆ.