Feb 27, 2021, 10:51 AM IST
ಬೆಂಗಳೂರು(ಫೆ.27): ಭೂವಂಚಕರಿಗೆ ಹೆಬ್ಬಾಳ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಸಾಥ್ ಕೊಟ್ಟಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ. ಹೌದು, ಎಸ್ಸಿ, ಎಸ್ಟಿಗೆ ಸೇರಿದಂತ ಭೂಮಿ ನುಂಗಿದವರ ಶಾಸಕ ಭೈರತಿ ಸುರೇಶ್ ಪರ ನಿಂತಿದ್ದಾರೆ. ವಂಚನೆ ಕೇಸ್ ತನಿಖೆ ಮಾಡುತ್ತಿರುವ ಪೊಲೀಸರಿಗೆ ಶಾಸಕ ಭೈರತಿ ಸುರೇಶ್ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಸಿಎಂ ಬಿಎಸ್ವೈಗೆ ಹುಟ್ಟುಹಬ್ಬದ ಸಂಭ್ರಮ, ಗಣ್ಯರಿಂದ ಶುಭಾಶಯಗಳ ಮಹಾಪೂರ
ಆರೋಪಿ ಗುಲಾಮ್ ಮುಸ್ತಫಾ ಕಚೇರಿ ಮೇಲೆ ದಾಳಿ ಮಾಡಿದ ಪಿಎಸ್ಐಗೆ ಶಾಸಕರು ಫೋನ್ ಮೂಲಕ ಧಮ್ಕಿ ಹಾಕಿದ್ದಾರೆ. ದಾಳಿ ಮಾಡಿದ ತನಿಖಾಧಿಕಾರಿಗೆ ಗಲಾಟೆಗೆ ಬಂದಿದ್ದೀರಾ ಎಂದು ಶಾಸಕ ಭೈರತಿ ಸುರೇಶ್ ಪ್ರಶ್ನೆ ಮಾಡಿದ್ದಾರೆ.