ರಕ್ಕಸ ರಾಜಕಾಲುವೆಗಳು: ಬಿಗ್-3ಯಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ

ರಕ್ಕಸ ರಾಜಕಾಲುವೆಗಳು: ಬಿಗ್-3ಯಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ

Published : Nov 29, 2022, 09:41 PM IST

ರಾಜಕಾಲುವೆ ತೆರೆದ ಸ್ಥಿತಿಯಲ್ಲಿದ್ರು 8 ತಿಂಗಳವರೆಗೆ ಬಿಬಿಎಂಪಿ ಮಾತ್ರ ತಲೆಕೆಡಿಸಿಕೊಂಡಿರಲಿಲ್ಲ. ಅದರ ಮಧ್ಯೆ ರಾಜಕಾಲುವೆಗೆ ವ್ಯಕ್ತಿಯೊಬ್ಬರು ಬಿದ್ದು ಸಾವನ್ನಪ್ಪಿದ್ದರು. ಬಿಗ್-3ಯಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ  ಎದ್ನೋ ಬಿದ್ನೋ ಅಂತಾ  ರಾಜಕಾಲುವೆ ಸರಿಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಅದೆಷ್ಟೋ ರಕ್ಕಸ ರಾಜಕಾಲುವೆಗಳು ಜನರ ಜೀವವನ್ನ ಬಲಿ ಪಡೆಯುತ್ತಲೇ ಬಂದಿವೆ. ಬಿಬಿಎಂಪಿ ಮಾತ್ರ ನಮಗೂ ಅದಕ್ಕೂ ಸಂಬಂಧವಿಲ್ಲ ಅನ್ನೋ ರೀತಿ ನಿರ್ಲಕ್ಷ್ಯ ವಹಿಸಿತ್ತು. ಬೆಂಗಳೂರಿನ ರುಕ್ಮಿಣಿ ನಗರದಲ್ಲಿ ರಾಜಕಾಲುವೆ ಮೇಲಿನ ಸ್ಲ್ಯಾಬ್ ಓಪನ್ ಮಾಡಿ 8 ತಿಂಗಳು ಕಳೆದಿತ್ತು. ರಾಜಕಾಲುವೆ ತೆರೆದ ಸ್ಥಿತಿಯಲ್ಲಿದ್ರು 8 ತಿಂಗಳವರೆಗೆ ಬಿಬಿಎಂಪಿ ಮಾತ್ರ ತಲೆಕೆಡಿಸಿಕೊಂಡಿರಲ್ಲ. ಅದರ ಮಧ್ಯೆ ರಾಜಕಾಲುವೆಗೆ ವ್ಯಕ್ತಿಯೊಬ್ಬರು ಬಿದ್ದು ಸಾವನ್ನಪ್ಪಿದ್ದರು. ಬಿಗ್-3ಯಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ. ಏಷ್ಯಾನೆಟ್ ಸುವರ್ಣನ್ಯೂಸ್ನ ಬಿಗ್-3ಯಲ್ಲಿ ಅಕ್ಟೋಬರ್ 17 ರಂದು ಸುದ್ದಿ ಪ್ರಸಾರ ಮಾಡಿ ಅಧಿಕಾರಿಗಳನ್ನ ಖಡ್ಕ್ ಆಗಿಯೇ ತರಾಟೆಗೆ ತೆಗೆದುಕೊಂಡಿತ್ತು. ಆದಾದ ನಂತರ ಎದ್ನೋ ಬಿದ್ನೋ ಅಂತಾ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಥಳಕ್ಕೆ ದೌಡಾಯಿಸಿದ್ರು. ಸಾಕಷ್ಟು ತಿಂಗಳಿನಿಂದ ನೆನೆಗುದಿಗೆ ಬಿದ್ದಿದ್ದ ಕೆಲಸ ಮತ್ತೆ ಚುರುಕು ಗೊಂಡಿತು. ಇದನ್ನ ಕಂಡ ಸ್ಥಳಿಯರು ನಾವು  ಅದೆಷ್ಟೇ ಬಾರಿ ಮನವಿ ಮಾಡಿದ್ರು ಖ್ಯಾರೆ ಅಂತಿರಲಿಲ್ಲ. ನಿಮ್ಮ ಸುವರ್ಣನ್ಯೂಸ್ ಬಿಗ್-3. BIG-3 ಗೆ ಯಾರೂ ಟಾರ್ಗೇಟ್ ಆಲ್ಲ. ನಮಗೆ ಜನರ ಸಮಸ್ಯೆಗಳೇ ಟಾರ್ಗೇಟ್.

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more