Aug 21, 2021, 11:09 PM IST
ಮಂಗಳೂರು(ಆ. 21) ಮಂಗಳೂರಿನಲ್ಲಿ ಕೊರೋನಾ ಕೇಕೆ ಹಾಕುತ್ತಿದೆ. ಬೆಳ್ತಂಗಡಿ ತಾಲೂಕಿನ ಕಾಲೇಜಿನ ಹನ್ನೊಂದು ಜನರಲ್ಲಿ ಕೊರೋನಾ ಕಾಣಿಸಿಕೊಂಡಿದ್ದು ಕಾಲೇಜ್ ಸೀಲ್ ಡೌನ್ ಮಾಡಲಾಗಿದೆ. ಪಕ್ಕದ ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿರುವುದು ಗೊತ್ತೇ ಇದೆ.
ಬೆಂಗಳೂರಿಗೂ ತಪ್ಪಿಲ್ಲ ಕೊರೋನಾ ಆತಂಕ
ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣದಲ್ಲಿದ್ದರೂ ಅಲ್ಲಲ್ಲಿ ಎಚ್ಚರಿಕೆ ಘಂಟೆ ನೀಡುತ್ತಲೇ ಇದೆ. ಈ ನಡುವೆ ಒಂದೇ ಕಾಲೇಜಿನ ವಿದ್ಯಾರ್ಥಿಗಳಲ್ಲಿ ವೈರಸ್ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಆಡಳಿತ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಮೂರನೇ ಅಲೆಗೂ ಮುನ್ನ ಎಚ್ಚರಿಕೆ ಹೆಜ್ಜೆ ಇಡಬೇಕಾದದ್ದು ಅನಿವಾರ್ಯ.