Jan 5, 2022, 11:59 PM IST
ಬೆಂಗಳೂರು(ಜ. 05) ಏರುತ್ತಿರುವ ಕೊರೋನಾ (Coronavirus) ತಡೆಗೆ ಸರ್ಕಾರ (Karnataka Govt) ಕಠಿಣ ಕ್ರಮ ತೆಗೆದುಕೊಂಡಿದ್ದು ಬೆಂಗಳೂರಿನಲ್ಲಿ (Bengaluru) ಟಫ್ ರೂಲ್ಸ್ ಜಾರಿ ಮಾಡಿದೆ. ಮೂರನೇ ಅಲೆ ಆರಂಭದಲ್ಲೇ ಕರ್ನಾಟಕ ಎಚ್ಚೆತ್ತುಕೊಂಡಿದ್ದು ರಾಜಧಾನಿ ಬೆಂಗಳೂರಿನಲ್ಲಿ ಕಟ್ಟು ನಿಟ್ಟಿನ ನಿಯಮ ಜಾರಿ ಮಾಡಿದೆ.
Corona Update ಕರ್ನಾಟಕದಲ್ಲಿ ಕೊರೋನಾ ಕೇಸ್ ದ್ವಿಗುಣ, ಹೆಚ್ಚಾಯ್ತು ಆತಂಕ
ಒಂದು ಕಡೆ ಮುಂಬೈನಿಂದ ಕಾರ್ಮಿಕರು ಕೊರೋನಾ ಹೊತ್ತು ತಂದಿದ್ದರೆ ಇನ್ನೊಂದು ಕಡೆ ಓಂ ಶಕ್ತಿ ಭಕ್ತರಿಂದಲೂ ಆತಂಕ ಎದುರಾಗಿದೆ. ಬಳ್ಳಾರಿಯ ವಿದ್ಯಾರ್ಥಿಗಳಿಗೆ ಕೊರೋನಾ ಕಾಣಿಸಿಕೊಂಡಿದೆ. ಕೊರೋನಾ ಕಾರಣಕ್ಕೆ ಪಾದಯಾತ್ರೆಗೆ ಅವಕಾಶ ಇಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಕಾಂಗ್ರೆಸ್ ಮಾತ್ರ ನಾವು ಪಾದಯಾತ್ರೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎನ್ನುತ್ತಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ