Jul 3, 2020, 5:37 PM IST
ನವದೆಹಲಿ (ಜು. 03): ಪ್ರಧಾನಿ ಮೋದಿ ಭಾರತ - ಚೀನಾ ಗಡಿಗೆ ಭೇಟಿ ನೀಡಿ ಸೈನಿಕರ ಜೊತೆ ಮಾತನಾಡಿದ್ದಾರೆ. ಅವರ ಶೌರ್ಯವನ್ನು ಶ್ಲಾಘಿಸಿದ್ದಾರೆ. 'ನಿಮ್ಮೊಂದಿಗೆ ನಾವಿದ್ದೇವೆ. ಭಾರತದ ತಾಕತ್ತನ್ನು ಜಗತ್ತಿಗೆ ತೋರಿಸಿದ್ದೀರಿ' ಎಂದು ಅವರಲ್ಲಿ ಆತ್ಮಬಲವನ್ನು ತುಂಬಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗಡಿಗೆ ಪ್ರಧಾನಿ ಬೇಟಿ ನೀಡಿರುವುದು ಸೈನಿಕರಲ್ಲಿಯೂ ಕೂಡಾ ಆತ್ಮ ವಿಶ್ವಾಸವನ್ನು ತುಂಬಿದೆ. ನಮ್ಮ ಜೊತೆ ಇಡೀ ದೇಶವೇ ನಿಂತಿದೆ ಎನ್ನುವ ಬಲ ಬಂದಂತಾಗಿದೆ. ಪ್ರಧಾನಿಯವರ ಲಡಾಕ್ ಭೇಟಿಯನ್ನು ವಿಶ್ಲೇಷಕರು ಬೇರೆ ಬೇರೆ ರೀತಿ ವಿಶ್ಲೇಷಿಸುತ್ತಿದ್ದಾರೆ. ಚಿಂತಕರಾದ ಚಕ್ರವರ್ತಿ ಸೂಲಿಬೆಲೆ ಹೇಳುವುದು ಹೀಗೆ..!