ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಬ್ಲಾಸ್ಟ್ ಉಗ್ರರ ವಿಚಾರಣೆ, ಬಯಲಾಯ್ತು ಸ್ಫೋಟಕ ಮಾಹಿತಿ

Apr 13, 2024, 11:15 PM IST

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆ ತಂದಿರುವ ಎನ್ಐಎ 10 ದಿನಗಳ ಕಸ್ಟಡಿಗೆ ಪಡೆದಿದ್ದಾರೆ.  ಇದೀಗ ವಿಚಾರಣೆ ಆರಂಭಗೊಂಡಿದ್ದು ಸ್ಫೋಟಕ ಮಾಹಿತಿ ಹೊರಬರುತ್ತಿದೆ. ಈ ಉಗ್ರರು ಪಶ್ಚಿಮ ಬಂಗಳದ ಕೆಲ ಜಿಲ್ಲೆಗಳಲ್ಲಿ ತಂಗಿದ್ದರು. ಆದರೆ ಎಲ್ಲೂ ಕೂಡ ಎರಡು ದಿನಕ್ಕಿಂತ ಹೆಚ್ಚು ದಿನ ತಂಗಿಲ್ಲ. ಪ್ರತಿ ಬಾರಿ ಹಿಂದೂ ಹೆಸರಿನ ನಕಲಿ ಆಧಾರ್ ಕಾರ್ಡ್ ನೀಡಿ ಹೊಟೆಲ್ ರೂಂ ಪಡೆದುಕೊಂಡಿದ್ದ ಮಾಹಿತಿ ಬಯಲಾಗಿದೆ. ವಿದೇಶಿ ಮೂಲಗಳಿಂದ ಈ ಉಗ್ರರಿಗೆ ಹಣ ಸಂದಾಯವಾಗಿದೆ ಅನ್ನೋ ಮಾಹಿತಿಯನ್ನು ಎನ್ಐಎ ಹೇಳಿದೆ.