Sep 14, 2022, 5:29 PM IST
ದೇವಕಾರ್ಯ, ಪಿತೃಕಾರ್ಯದಿಂದ ಎಂದಿಗೂ ವಿಮುಖರಾಗಬಾರದು. ಚತುರ್ಮುಖ ಬ್ರಹ್ಮ ಎಲ್ಲ ದೇವತೆಗಳನ್ನೂ ಸೃಷ್ಟಿ ಮಾಡಿ ಒಂದೊಂದು ದೇವತೆಗೂ ಒಂದೊಂದು ಅಧಿಕಾರ ವಹಿಸಿ ಕೊಟ್ಟ. ಹಾಗೆಯೇ ಪ್ರಾಣಿ, ಪಕ್ಷಿ, ಸಸ್ಯಸಂಕುಲದ ಸೃಷ್ಟಿ, ಪರಿಪಾಲನೆಯನ್ನು ಮೂರು ದೇವತೆಗಳಿಗೆ ವಹಿಸಿದ. ಆ ಮೂರು ದೇವತೆಗಳೇ ಪಿತೃ ದೇವತೆಗಳು. ಆ ಪಿತೃ ದೇವತೆಗಳೇ ವಸು, ರುದ್ರ, ಆದಿತ್ಯ.. ಇವರೇ ಈ ಪಿತೃಪಕ್ಷದ ಪ್ರಧಾನ ದೇವತೆಗಳು. ಇವರು ತಂದೆ, ತಾತ, ಮುತ್ತಾತರನ್ನು ಪ್ರತಿನಿಧಿಸುತ್ತಾರೆ. ಈ ಬಗ್ಗೆ ವಿವರವಾಗಿ ತಿಳಿಸಿಕೊಡುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.