ಗೌರಿ ಗಣೇಶ ಸ್ಪೆಷಲ್: ನಟ ಶ್ರೀಮುರಳಿ ಜೊತೆ ಗಣಪತಿ ಬಪ್ಪನ ಮಾತುಕತೆ..!

Sep 10, 2021, 5:47 PM IST

ಬೆಂಗಳೂರು (ಸೆ. 10): ಗೌರಿ ಗಣೇಶ, ಗಣೇಶ- ಚತುರ್ಥಿ ಹಬ್ಬ ಎಂದರೆ ಅಲ್ಲಿ ಸಡಗರ, ಸಂಭ್ರಮ, ಒಂದು ಕಳೆ ಇರುತ್ತದೆ. ನಾಡಿದಾದ್ಯಂತ ಗಣೇಶನ ಪೂಜೆ, ಆರಾಧನೆ ನಡೆಯುತ್ತದೆ. ವಿಘ್ನ ನಿವಾರಕನಾದ ವಿನಾಯಕನ ಆಶೀರ್ವಾದ ಇದ್ರೆ ಸಾಕು ಎಂದು ನಾವೆಲ್ಲರೂ ಬೇಡಿಕೊಳ್ಳುತ್ತೇವೆ. ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಹಬ್ಬವನ್ನು ಆಚರಿಸಲಾಗಿರಲಿಲ್ಲ. ಈ ಬಾರಿ ಕೊಂಚ ಕೊರೋನಾ ಸೋಂಕು ಕಡಿಮೆಯಾಗಿದ್ದರಿಂದ ಆಚರಿಸಲಾಗಿದೆ.

ನಟಿ ರಚಿತಾ ರಾಮ್‌ಗೆ ಕಾಂಚೀವರಂ ಸೀರೆ ಗಿಫ್ಟ್ ಕೊಟ್ಟ ಕಂಗಣಾ ರಣಾವತ್ 'ತಲೈವಿ' ತಂಡ!

ಗಣೇಶ ಚತುರ್ಥಿ ಸ್ವಲ್ಪ ವಿಶೇಷವಾಗಿರಲಿ, ವಿಶಿಷ್ಟವಾಗಿರಲಿ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ವಿನೂತನ ಕಾರ್ಯಕ್ರಮ ರೂಪಿಸಿದೆ. ಇದರ ವಿಶೇಷತೆ ಎಂದರೆ ನಟ ಶ್ರೀಮುರಳಿ ಅವರನ್ನು ನಮ್ಮ ಗಣೇಶನೇ ಮಾತನಾಡಿಸಿದ್ದಾನೆ. ಶ್ರೀ ಮುರಳಿ- ಗಣಪತಿ ಬಪ್ಪನ ಮಾತುಕತೆ ಹೇಗಿದೆ ನೀವೇ ನೋಡಿ..!