Mar 25, 2019, 11:30 AM IST
ಸುಮಲತಾ V/S ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯಿಂದ ಮಂಡ್ಯ ಚುನಾವಣಾ ಕಣ ಹೈವೋಲ್ಟೇಜ್ ಕಣವಾಗಿದೆ. ಸಿಎಂ ಕುಮಾರಸ್ವಾಮಿ ಮಾತನಾಡುವ ವೇಳೆ ಯಶ್-ದರ್ಶನ್ ಜೋಡೆತ್ತುಗಳಲ್ಲ. ಕಳ್ಳ ಎತ್ತುಗಳು ಎಂದು ಮೂದಿಸಿದ್ದರು. ಇದು ಆಕ್ರೋಶಕ್ಕೆ ಕಾರಣವಾಗಿದೆ. ಮಂಡ್ಯದಲ್ಲಿ ನಮ್ಮ ಕುಟುಂಬ, ಅಂಬರೀಶ್, ಅಭಿಷೇಕ್ ದರ್ಶನ್- ಯಶ್ ಹೆಸರು ಹೇಳದೇ ಪ್ರಚಾರ ನಡೆಸಲಿ ಎಂದು ಜೆಡಿಎಸ್ ನಾಯಕರಿಗೆ ಸುಮಲತಾ ಅಂಬರೀಶ್ ನೇರ ಸವಾಲು ಹಾಕಿದ್ದಾರೆ.