ಋಷಿ ಕೃಷಿ ದೇಶ ನಮ್ಮದು, ಅದನ್ನು ಬಿಟ್ಟರೆ ಹರನೂ ಒಪ್ಪಲಾರ; ರವಿಶಂಕರ್ ಗುರೂಜಿ

Jan 14, 2020, 4:43 PM IST

ದಾವಣಗೆರೆ (ಜ. 14):  ವಚನಾನಂದ ಸ್ವಾಮೀಜಿಯವರು 21 ತಿಂಗಳಲ್ಲಿ ಬಂಜರು ಭೂಮಿಯಲ್ಲಿ ಸ್ವರ್ಗ ಸೃಷ್ಟಿಸಿದ್ದಾರೆ.  ವೀರ ಹಾಗೂ ಭಕ್ತಿ ರಸ ಈ ಸಮಾಜದಲ್ಲಿದೆ.  ಇದಕ್ಕೆ ಉದಾಹರಣೆ ರಾಣಿ ಚನ್ನಮ್ಮ, ಅಕ್ಕಮಹಾದೇವಿ ಗುರುಗಳ ಸಾನ್ನಿಧ್ಯದಲ್ಲಿದ್ದಾಗ ಅಧ್ಯಾತ್ಮ ಕಂಪು, ತಂಪು, ತೃಪ್ತಿ ಲಭಿಸುತ್ತದೆ ಎಂದು ಇಲ್ಲಿನ ಹರ ಸಮಾವೇಶದಲ್ಲಿ ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ರವಿಶಂಕರ್‌ ಗುರೂಜಿ ಅವರು ಭಾಷಣದಲ್ಲಿ ಹೇಳಿದ್ದಾರೆ. 

ಬೆಳ್ಳಿಬೆಡಗು ಸಂಭ್ರಮದಲ್ಲಿ ಪಂಚಮಸಾಲಿ ಟ್ರಸ್ಟ್: ಸಂಕ್ರಾಂತಿ ಸ್ಪೆಷಲ್ ಹರಜಾತ್ರೆ

ಯಾರಲ್ಲಿ ಉತ್ಸಾಹ ಹಾಗೂ ಸಾಧನೆ ಛಲವಿದೆಯೋ ಅವರೆಲ್ಲಾ ಯುವಕರು. ವಯಸ್ಸು ಯುವ ಮನಸ್ಸಿಗೆ ಬಾಧಕವಲ್ಲ. ಇಂಥ ಉತ್ಸಾಹಿ ಸ್ವಾಮಿಗಳ ನೇತೃತ್ವದಲ್ಲಿ ಸಮಾಜ ಸಂಘಟಿತವಾಗುತ್ತಿರುವುದು ನಮ್ಮ ಹೆಮ್ಮೆ. ಹಲವು ಭಾಷೆಗಳ ಮೇಲೆ ಹಿಡಿತ ಹೊಂದಿರುವ ವಚನಾನಂದರು, ಉತ್ತಮ ವಾಗ್ಮಿಗಳು.  ಅವರು ಸಮಾಜವನ್ನು ಸಂಯೋಜನೆ ಹಾಗೂ ಸಂಘಟಿತಗೊಳಿಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.