ಭಕ್ತರನ್ನು ಅಟ್ಟಾಡಿಸಿಕೊಂಡು ಹೊಡೆದ ದೈವ; 6ಕ್ಕೂ ಹೆಚ್ಚು ಜನರಿಗೆ ಗಾಯ!

Nov 8, 2019, 5:21 PM IST

ಕಾಸರಗೋಡು(ನ.08): ಕಷ್ಟಗಳನ್ನು ಪರಿಹರಿಸಿ, ಸುಖ ಶಾಂತಿ ನೆಮ್ಮದಿ ನೀಡು ಎಂದು ಭಕ್ತರು ದೈವದ ಬಳಿ ಬಂದರೆ, ರೊಚ್ಚಿಗೆದ್ದ ದೈವ ಭಕ್ತರನ್ನು ಅಟ್ಟಾಡಿಸಿಕೊಂಡು ಹೊಡೆದ ಘಟನೆ ನಡೆದಿದೆ. 

ಇದನ್ನೂ ಓದಿ: ಮೆಟ್ರೋನಲ್ಲಿ ಈಗ ಎಲ್ಲಾ ಓಪನ್! ವೈರಲ್ ಆಗಿದೆ ಜೋಡಿಯ ರೊಮ್ಯಾನ್ಸ್

ಕಾಸರಗೋಡಿನ ಸಮೀಪದದಲ್ಲಿ ಚಾಮುಂಡಿ ದೈವದ ಸಾಂಪ್ರದಾಯಿಕ ನರ್ತನದ ವೇಳೆ ದೈವ, ನೆರೆದಿದ್ದ ಭಕ್ತರ ಮೇಲೆ ಲಾಠಿ, ದೊಣ್ಣೆಯಿಂದ ಹೊಡೆದಿದೆ. ಹೊಡೆತ ತಿಂದ ಭಕ್ತರ ಮೈಮೇಲೆ ಬಾಸುಂಡೆ ಬಂದಿದೆ. ಇದೀಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೈವ ಥಳಿಸಿದ ದೃಶ್ಯ ವೈರಲ್ ಆಗಿದೆ.