ಒಬ್ಬನೇ ಇದ್ದೇನೆ ಎಂದು ಸ್ಟೇಟಸ್ ಹಾಕಿ ಸಾವು ತಂದುಕೊಂಡ ರೌಡಿಶೀಟರ್..!

Sep 16, 2021, 11:45 AM IST

ಬೆಂಗಳೂರು (ಸೆ. 16): ಇದು ರೌಡಿಶೀಟರ್ ಒಬ್ಬ ತನ್ನ ಸಾವಿಗೆ ತಾನೇ ಇನ್ವಿಟೇಷನ್ ಕೊಟ್ಟ ಕಥೆ. ಸೆಲ್ಫಿ ತೆಗೆದು ಸ್ಟೇಟಸ್‌ಗೆ ಹಾಕಿ ದುಶ್ಮನ್‌ಗೆ ಮೆಸೇಜ್ ಕೊಟ್ಟಿದ್ದ. ಇದು ರೌಡಿ ಶೀಟರ್ ಅರವಿಂದ್ ಮರ್ಡರ್‌ಗೆ ಕಾರಣವಾಯ್ತು. ಕೆಲವು ತಿಂಗಳಿನಿಂದ ಅರವಿಂದ್ ಕೊಲೆಗೆ ಸ್ಕೆಚ್ ಹಾಕಲಾಗಿತ್ತು. ಹಾಗಾಗಿ ಅರವಿಂದ್ ಹುಡುಗರನ್ನು ಜೊತೆಗಿಟ್ಟುಕೊಂಡು ಓಡಾಡುತ್ತಿದ್ದ. ಮೊನ್ನೆ ಗ್ರೌಂಡ್‌ಗೆ ಒಬ್ಬನೇ ಬಂದಿದ್ದೇನೆ ಎಂದು ಸ್ಟೇಟಸ್ ಹಾಕಿದ್ದ. ಇದನ್ನು ಗಮನಿಸಿದ ಹಂತಕರು, ಫುಟ್‌ಬಾಲ್ ಸ್ಟೇಡಿಯಂನಲ್ಲಿ ಮರ್ಡರ್ ಮಾಡಿದ್ದಾರೆ. 

ಬಳ್ಳಾರಿಯಲ್ಲೊಂದು ರೇಪ್ ಗ್ಯಾಂಗ್: ಸಂಚಲನ ಹುಟ್ಟಿಸಿದ ಆಡಿಯೋ..!