Narendra Modi: ರಾಜ್ಯದಲ್ಲಿ ಮುಂದುವರೆದ ಮೋದಿ ರೌಂಡ್ಸ್: ಪ್ರಧಾನಿಗಾಗಿ ಅಭಿಮಾನಿಗಳಿಂದ ವಿಶೇಷ ಉಡುಗೊರೆ!

Narendra Modi: ರಾಜ್ಯದಲ್ಲಿ ಮುಂದುವರೆದ ಮೋದಿ ರೌಂಡ್ಸ್: ಪ್ರಧಾನಿಗಾಗಿ ಅಭಿಮಾನಿಗಳಿಂದ ವಿಶೇಷ ಉಡುಗೊರೆ!

Published : Apr 30, 2024, 09:43 AM ISTUpdated : Apr 30, 2024, 09:44 AM IST

ಭಾಷಣದ ಉದ್ದಕ್ಕೂ ಕಾಂಗ್ರೆಸ್ ಪಕ್ಷದ ವಿರುದ್ಧ ಮೋದಿ ವಾಗ್ದಾಳಿ
ಕಂಬಳಿ ಮತ್ತು ಸೆಂಗೋಲ್  ನೀಡಿ ಸನ್ಮಾನಿಸಿದ ಚರಂತಿಮಠ್
ಜನರ ಮುಂದೆ ಬಿಜೆಪಿ ಪಕ್ಷದ ರಿಪೋರ್ಟ್ ಕಾರ್ಡ್ ಇಟ್ಟ ಮೋದಿ

ರಾಜ್ಯದಲ್ಲಿ ಮೊದಲನೇ ಹಂತದ ಮತದಾನದ ಪ್ರಕ್ರಿಯೆ, ಶಾಂತವಾಗಿ ಅಂತ್ಯವಾಗಿದೆ. ಈಗೇನಿದ್ದರೂ ಎಲ್ಲರ ಚಿತ್ತ ಎರಡನೇ ಹಂತದ ಮತದಾನದತ್ತ. ರಾಜ್ಯ ರಣಕಣದಲ್ಲಿ 2ನೇ ಹಂತದ ಮತ ಕಹಳೆ ಮೊಳಗಿದ್ದಾಗಿದೆ. ದಕ್ಷಿಣ ಕರ್ನಾಟಕ ಭಾಗದ 14 ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯವನ್ನ ಮತದಾರ(Voters) ಆಲ್‌ರೆಡಿ ಬರೆದಿದ್ದಾಗಿದೆ. ಈಗೇನಿದ್ದರೂ 2ನೇ ಹಂತದಲ್ಲಿ ಮತದಾನದ ಕಣ ರಂಗೇರುತ್ತ ಹೋಗ್ತಿದೆ. 2ನೇ ಹಂತದ ಮತದಾನ ಇದೇ ಮೇ 7ರಂದು ನಡೆಯಲಿದೆ. ಅದರ ಎಫೆಕ್ಟ್ ಎಲ್ಲೆಲ್ಲೂ ಕ್ಯಾಂಪೇನ್, ರೋಡ್ ಶೋಗಳು ಭರ್ಜರಿಯಾಗಿ ನಡೀತಾ ಇದೆ. ಅಭ್ಯರ್ಥಿಗಳು ಸಕಲ ಸಿದ್ಧತೆಗಳನ್ನ ಮಾಡಿಕೊಂಡೇ ಅಖಾಡಕ್ಕೆ ಇಳಿದಿದ್ದಾರೆ. ಅವರನ್ನ ಬೆಂಬಲಿಸುವುದಕ್ಕೆ ಪಕ್ಷದ ವರಿಷ್ಠರು ಮತಶಿಖಾರಿಗೆ ಇಳಿದಿದ್ದಾಗಿದೆ. ಅದರಲ್ಲೂ ಪ್ರಧಾನಿ ಮೋದಿ ಕೂಡ ಈ ಬಾರಿ ಅಬ್ಬರದ ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದು ವಿಶೇಷ. ಮೋದಿ(Narendra Modi) ಹೋದಲ್ಲಿ ಬಂದಲ್ಲಿ ಹವಾ ಸೃಷ್ಟಿಯಾಗೋದು ಕಾಮನ್. ಭಾರತ ಕಂಡ ಅಪರೂಪದ ರಾಜಕೀಯ ನಾಯಕ ನಮೋ. ಇವರು ಎಲ್ಲೆಲ್ಲ ಹೋಗ್ತಿರ್ತಾರೋ ಅಲ್ಲೆಲ್ಲ ಹೊಸ ಸಂಚಲನವೇ ಸೃಷ್ಟಿಯಾಗಿರುತ್ತೆ. ಈಗ ಪ್ರಧಾನಿ ಮೋದಿ ಮತ್ತೆ ಕರ್ನಾಟಕದಲ್ಲಿ(Karnataka) ಕಾಣಿಸಿಕೊಂಡಿದ್ದಾರೆ. ಅದೇ ಖದರ್ ಮತ್ತು ಅದೇ ಸ್ಟೈಲ್‌ನಿಂದ. ಅಷ್ಟಕ್ಕೂ ಮೋದಿ ಇವತ್ತು ಕಾಣಿಸಿಕೊಂಡಿದ್ದು, ಎಲ್ಲಿ ಗೊತ್ತಾ ಕೋಟೆಗಳ ನಾಡು ಬಾಗಲಕೋಟೆಯಲ್ಲಿ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರು ಇಂದು ವೃತ್ತಿಯಲ್ಲಿ ಪರಿಶ್ರಮ ಪಡಬೇಕಾಗಿದ್ದು, ಭಯದ ವಾತಾವರಣವಿರಲಿದೆ..

27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
23:52ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
44:07ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್​ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
26:58ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ
Read more