May 17, 2022, 2:33 PM IST
ಬಾಗಲಕೋಟೆ, (ಮೇ.17): ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ ಪ್ರಕರಣ ತಿರುವು ಪಡೆದುಕೊಂಡಿದೆ. ವಕೀಲೆ ಸಂಗೀತಾ ಮೇಲೆ ಹಲ್ಲೆ ಮಾಡಿದ್ದ ಮಹಾಂತೇಶ್ ಚೊಳಚಗುಡ್ಡ ಗೆ ವಕೀಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಬಹಿರಂಗಗೊಂಡಿದೆ. ಮೇ 14 ರಂದು ವೀರಭದ್ರೇಶ್ವರ ಗಿಪ್ಟ್ ಸೆಂಟರ್ ಮಾಲಿಕ ಮಹಾಂತೇಶ್ ಚೊಳಚಗುಡ್ಡ, ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ ಮಾಡಿದ್ದರು.
ವಕೀಲೆ ಮೇಲೆ ಹಲ್ಲೆ ಪ್ರಕರಣ: ವಕೀಲರ ಸಂಘದಿಂದ ಪ್ರತಿಭಟನೆ
ಮಹಾಂತೇಶ್ ಚೊಳಚಗುಡ್ಡ, ವಕೀಲೆ ಮೇಲೆ ಹಲ್ಲೆ ಮಾಡುವುದಕ್ಕಿಂತ ಮುಂಚೆ ಅದೇ ದಿನ (ಮೇ 14) ರಂದು ವಕೀಲೆ ಸಂಗೀತಾ, ಮಹಾಂತೇಶ್ ಚೊಳಚಗುಡ್ಡ ಅವರ ಗಿಪ್ಟ್ ಸೆಂಟರ್ ಗೆ ಹೋಗಿದ್ದರು. ಗಿಪ್ಟ್ ಸೆಂಟರ್ ಎದುರು ವಕೀಲೆ ಮಹಾಂತೇಶ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿದ ಹೊಡೆದಿದ್ದರು. ಬಾಗಲಕೋಟೆಯ ಕೆರೂಡಿ ಆಸ್ಪತ್ರೆ ಬಡಾವಣೆಯಲ್ಲಿರುವ ಮಹಾಂತೇಶ್ ಗಿಪ್ಟ್ ಸೆಂಟರ್ ಗೆ ಗಂಡ ನವೀನ ಜೊತೆ ವಕೀಲೆ ಸಂಗೀತಾ ಶಿಕ್ಕೇರಿ ಹೋಗಿ ಮಹಾಂತೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ಮಹಾಂತೇಶ್ ವಕೀಲೆ ಮೇಲೆ ಹಲ್ಲೆ ಮಾಡಿದ್ದಾರೆ.