Coronavirus Karnataka
Apr 9, 2020, 3:55 PM IST
ಬೆಂಗಳೂರು(ಏ.09): ಕೊರೋನಾ ವೈರಸ್ ಲಾಕ್ಡೌನ್ನಿಂದ ಹಲವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಇಂತವರಿಗೆ ಇದೀಗ ದೇವಸ್ಥಾನ, ಸಂಘ ಸಂಸ್ಥೆ ಸೇರಿದಂತೆ ಹಲವರು ಉಚಿತ ಊಟ ನೀಡುತ್ತಿದ್ದಾರೆ. ಇದೀಗ ಲಗ್ಗೆರೆಯ ಬಿಜೆಪಿ ಮುಖಂಡ ನಾರಾಯಣಸ್ವಾಮಿ ಶ್ರೀ ಸಾಯಿ ಕ್ಯಾಂಟೀನ್ ಮೂಲಕ ಲಗ್ಗೆರೆ ವಾರ್ಡ್ನಲ್ಲಿ ಹಸಿದವರಿಗೆಲ್ಲಾ ಅನ್ನದಾನ ಮಾಡುತ್ತಿದ್ದಾರೆ. 19 ಕ್ಯಾಂಟೀನ್ ಮೂಲಕ ಪ್ರತಿನಿತ್ಯ 5000ಕ್ಕೂ ಹೆಚ್ಚು ಮಂದಿಯ ಹಸಿವು ನೀಗಿಸುತ್ತಿದ್ದಾರೆ. ಈ ಕಾರ್ಯಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆಗಳ ಸುರಿಮಳೆ ಬರುತ್ತಿದೆ.