ಪಟಾಕಿ ಗೋದಾಮಿಗೆ ಬೆಂಕಿ: ತಪ್ಪಿದ ಭಾರೀ ಅನಾಹುತ!

Nov 8, 2018, 1:58 PM IST

ಆನೇಕಲ್(ನ.8): ದೀಪಾವಳಿ ಅಂದ್ರೆ ಪಟಾಕಿಗಳದ್ದೇ ಹಾವಳಿ. ಆದ್ರೆ ಅದೆಷ್ಟೋ ಕಡೆ ಪಟಾಕಿ ಸಿಡಿತದಿಂದ ಅನೇಕ ಅನಾಹುತಗಳು ಸಂಭವಿಸುತ್ತವೆ. ಅಂತೆಯೇ ನಿನ್ನೆ ರಾತ್ರಿ ಸೋಫಾ ತಯಾರಿಕಾ ಘಟಕದ ಗೋದಾಮಿಗೆ ಪಟಾಕಿಯ ಕಿಡಿ ತಗುಲಿ ಅಲ್ಲಿದ್ದ ವಸ್ತುಗಳೆಲ್ಲ ಸಂಪೂರ್ಣ ಭಸ್ಮವಾಗಿದೆ.  ಅನೇಕಲ್ ತಾಲೂಕಿನ ಚಂದಾಪುರ ಸಮೀಪದ ಬನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಕೂಡಲೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ . ಘಟನೆ ಸಂಬಂಧ ಸೂರ್ಯಸಿಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..