ಬೆಂಗಳೂರು (ಏ.11): ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆ ಬಳಿಕ ಎಲ್ಲರ ಗಮನವೀಗ ಲೋಕಲ್ ಸಮರದತ್ತ ನೆಟ್ಟಿದೆ. ಪಂಚಾಯತಿ ಹಾಗೂ ನಗರ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಪತ್ರ ಬಳಕೆ ಮಾಡುವ ಬಿಲ್ ಮಾತ್ರ ಇನ್ನೂ ಪರಿಶೀಲನೆಯಲ್ಲಿದೆ. ಇವಿಎಂ ಬದಲು ಮತಪತ್ರ ಬಳಸಲು ಬಿಲ್ ಅನ್ನು ರಾಜ್ಯ ಸರ್ಕಾರ ಅಂಗೀಕರಿಸಿತ್ತು. ಆದರೆ, ಈ ವಿಧೇಯಕ ಇನ್ನೂ ರಾಜ್ಯಪಾಲರ ಬಳಿಯೇ ಬಾಕಿ ಉಳಿದಿದೆ. ಈ ಬಿಲ್ ಹೊರತುಪಡಿಸಿ ಉಳಿದ 10 ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್ಡೇಟ್ ಇಲ್ಲಿದೆ.
07:46 PM (IST) Apr 11
ವರದಿ: ಯಡಗೆರೆ ಮಂಜುನಾಥ್
1957ರಲ್ಲಿ ನಿರ್ಮಾಣವಾದ ಭದ್ರಾ ಅಣೆಕಟ್ಟಿನಿಂದಾಗಿ ನರಸಿಂಹರಾಜಪುರ ತಾಲೂಕಿನ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದವು. ಇದೀಗ, ₹38 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಹೊನ್ನೇಕೊಡಿಗೆ ಸಂಪರ್ಕ ಸೇತುವೆಯು 19 ಹಳ್ಳಿಗಳ 2 ಸಾವಿರಕ್ಕೂ ಹೆಚ್ಚು ಜನರಿಗೆ ಅನುಕೂಲ ಕಲ್ಪಿಸಿದೆ.
07:35 PM (IST) Apr 11
Vaibhav Sooryavanshi: 15ನೇ ವರ್ಷದ ವೈಭವ್ ಸೂರ್ಯವಂಶಿ ಭಾರತ ತಂಡಕ್ಕೆ ಎಂಟ್ರಿ ಕೊಡ್ತಾರಾ ಎಂಬ ಚರ್ಚೆ ಶುರುವಾಗಿದೆ. ಐಪಿಎಲ್ 2026ರಲ್ಲಿ ಸಂಚಲನ ಮೂಡಿಸಿದ ಬಿಹಾರದ ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರಾ ಎಂಬ ಚರ್ಚೆ ಶುರುವಾಗಿದೆ. ಹಾಗಾದರೆ ಸತ್ಯ ಏನು?
07:33 PM (IST) Apr 11
ನಟಿ ಸಾರಾ ಅರ್ಜುನ್ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಪವಿತ್ರ ಭಸ್ಮಾರತಿಯಲ್ಲಿ ಭಾಗಿಯಾಗಿದ್ದಾರೆ. ಈ ಆಧ್ಯಾತ್ಮಿಕ ಅನುಭವದಿಂದ ತಮಗೆ 'ತುಂಬಾ ಸಂತೋಷವಾಗಿದೆ' ಎಂದು ಅವರು ಹೇಳಿಕೊಂಡಿದ್ದಾರೆ. ಈ ದೇವಸ್ಥಾನವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.
06:55 PM (IST) Apr 11
Vaibhav Suryavanshi: ವೈಭವ್ ಸೂರ್ಯವಂಶಿ ಅವರು ಜ್ಯೋತಿಷ್ಯ ಅಥವಾ ಸಂಖ್ಯಾಶಾಸ್ತ್ರದ ಮೂಲಕ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಆ ಬಳಿಕ ಅವರು ಐಪಿಎಲ್ನಲ್ಲಿ ಒಂದಿಷ್ಟು ಸಿಕ್ಸರ್, ಫೋರ್ ಹೊಡೆದು ದಾಖಲೆ ಮಾಡಿದ್ದಾರೆ ಎನ್ನಲಾಗಿದೆ. ಏನದು?
06:50 PM (IST) Apr 11
ಭಾರತದಲ್ಲಿ ಗಂಟೆಗೆ 220 ಕಿ.ಮೀ ವೇಗದಲ್ಲಿ ಚಲಿಸುವ ಹೊಸ ರೈಲುಗಳು ಸಂಚಾರ ಆರಂಭಿಸಿದರೆ, ರಾಜಧಾನಿ ಬೆಂಗಳೂರಿನಿಂದ ಹುಬ್ಬಳ್ಳಿ ನಗರಕ್ಕೆ ಕೇವಲ 2 ಗಂಟೆಗಳಲ್ಲಿ ತಲುಪಬಹುದು. ವಂದೇ ಭಾರತ್ ರೈಲುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
06:50 PM (IST) Apr 11
06:35 PM (IST) Apr 11
06:22 PM (IST) Apr 11
ದೆಹಲಿ ಕರ್ನಾಟಕ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ, ಜೂಮ್ ಮೀಟಿಂಗ್ಗೆ ಅವಕಾಶ ನೀಡುವ ವಿಚಾರವಾಗಿ ಸದಸ್ಯರು ಮತ್ತು ಅಧ್ಯಕ್ಷರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷರ ವಿರೋಧದಿಂದಾಗಿ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಿಂದ ಹೊರನಡೆದರು.
06:09 PM (IST) Apr 11
ಮಹಿಳೆಯರು ವಿಶಿಷ್ಟ ಗುಣಗಳನ್ನು ಹೊಂದಿರುತ್ತಾರೆ. ಇವರು ಗಂಡನಿಗೆ ಸಂಪೂರ್ಣ ಬೆಂಬಲ ನೀಡುವುದಲ್ಲದೆ, ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ ಮತ್ತು ವ್ಯವಹಾರದಲ್ಲಿಯೂ ಜಾಣತನ ಪ್ರದರ್ಶಿಸುತ್ತಾರೆ. ತಮ್ಮ ಭಾವನೆಗಳನ್ನು ಸುಲಭವಾಗಿ ಬಹಿರಂಗಪಡಿಸದ ಇವರು ಆಳವಾದ ಚಿಂತನಾಶಕ್ತಿಯನ್ನು ಹೊಂದಿರುತ್ತಾರೆ.
06:07 PM (IST) Apr 11
ಬೆಂಗಳೂರಿನಲ್ಲಿ ತನ್ನ ಅಜ್ಜಿಯ ಮನೆಯಲ್ಲೇ ₹5 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಅಪ್ರಾಪ್ತ ಬಾಲಕನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಅಜ್ಜ-ಅಜ್ಜಿ ಆಸ್ಪತ್ರೆಗೆ ಹೋಗಿದ್ದಾಗ ಕೃತ್ಯ ಎಸಗಿದ್ದ ಈತ, ಮತ್ತೊಂದು ಕಳ್ಳತನ ಪ್ರಕರಣದಲ್ಲಿ ಈಗಾಗಲೇ ಚಿಕ್ಕಮಗಳೂರು ಪೊಲೀಸರಿಂದ ಬಂಧಿಸಲ್ಪಟ್ಟಿದ್ದನು.
05:32 PM (IST) Apr 11
05:28 PM (IST) Apr 11
Netflix Series To Watch: ಈ ವಾರ ನೆಟ್ಫ್ಲಿಕ್ಸ್ ಇಂಡಿಯಾದ ಟಾಪ್ 10 ಟ್ರೆಂಡಿಂಗ್ ಸೀರೀಸ್ಗಳ ಪಟ್ಟಿಯಲ್ಲಿ ಹೆಚ್ಚಾಗಿ ಇಂಗ್ಲಿಷ್ ಸರಣಿಗಳೇ ಇವೆ.4 ಹಿಂದಿ ವೆಬ್ ಸೀರೀಸ್ಗಳು ಕೂಡ ಇದರಲ್ಲಿ ಸ್ಥಾನ ಪಡೆದಿವೆ. ಇತ್ತೀಚೆಗೆ ಬಿಡುಗಡೆಯಾದ ಹಿಂದಿ ವೆಬ್ ಸೀರೀಸ್ ಒಂದು ನಂಬರ್ 1 ಸ್ಥಾನದಲ್ಲಿದೆ.
05:25 PM (IST) Apr 11
ಕೆಜಿಎಫ್-2 ನಂತರ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ನಟಿಸುತ್ತಿರುವ ರಾಕಿಂಗ್ ಸ್ಟಾರ್. ರಾವಣ ಪಾತ್ರದಲ್ಲಿ ಅಭಿನಯಿಸುತ್ತಿರುವ ಯಶ್. ರಾವಣನ ಪಾಸಿಟಿವ್, ನೆಗೆಟಿವ್ ವ್ಯಕ್ತಿತ್ಳವನ್ನು ಹೇಳಿದ ಬಳಿಕ ಅವರು ಪಾತ್ರ ಮಾಡಲು ಒಪ್ಪಿಗೆ ಕೊಟ್ಟರು ಅಂತಾರೆ ನಿರ್ದೇಶಕ ನಿತೀಶ್ ತಿವಾರಿ.
05:05 PM (IST) Apr 11
ಆತ ಪ್ರೇಕ್ಷಕನಿಗೆ ಎದುರಾಗುವುದು ಮೂರು ಹೊತ್ತೂ ಕುಡಿದು ತೂರಾಡುವ ಭಗ್ನಪ್ರೇಮಿಯಾಗಿ. ಇಂಥಾ ಅವಸ್ಥೆಯಲ್ಲಿ ನಾಯಕನ ಗ್ರಹಗತಿಗಳೆಲ್ಲ ಉಲ್ಟಾ ಹೊಡೆದು ಇಡೀ ಪರಿಸ್ಥಿತಿ ಆತನ ವಿರುದ್ಧ ತಿರುಗುತ್ತ ಹೋಗುತ್ತದೆ.
04:54 PM (IST) Apr 11
Garlic Gojju Recipe In Kannada: ಮನೆಯಲ್ಲಿ ತರಕಾರಿ ಇಲ್ಲ, ಊಟಕ್ಕೆ ಏನು ಮಾಡೋದು ಎಂದು ಕೆಲವರು ಅಂದುಕೊಂಡಿರಬಹುದು. ಅದರಲ್ಲಿಯೂ ಬೇಸಿಗೆಯಲ್ಲಿ ತಂಪು ಆಹಾರವೇ ಇಷ್ಟ ಆಗುತ್ತದೆ. ಬೇಸಿಗೆಯಲ್ಲಿ ಅನ್ನ ಸಾಂಬಾರ್ ಊಟ ಮಾಡೋದು ಕೂಡ ಕಷ್ಟ. ಈಗ ಒಂದೇ ಬೆಳ್ಳುಳ್ಳಿಯಿಂದ ಮರಿಗೆ ಗೊಜ್ಜು ಮಾಡೋದು ಹೇಗೆ?
04:53 PM (IST) Apr 11
ಪೀಟರ್ ಎಂಬ ತರುಣ ನಮಗೆ ಎದುರಾಗುವುದೂ ಇಂಥಾದ್ದೊಂದು ವಿಷಾದದಲ್ಲಿ ಅದ್ದಿ ತೆಗೆದಂಥಾ ಮುಖದಲ್ಲಿ. ಆತನ ವೇದನೆಗೆ ಕಾರಣವಾದ ಸಂಗತಿಗಳು ಅಸ್ಪಷ್ಟವಾಗಿ ತೆರೆದುಕೊಳ್ಳುತ್ತಾ, ಭೂತ ವರ್ತಮಾನಗಳ ನಡುವೆ ಕಣ್ಣಾಮುಚ್ಚಾಲೆಯಾಡುತ್ತದೆ.
04:42 PM (IST) Apr 11
ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರ ಅಜಯಸಿಂಗ್ ರಜಪೂತ ಅವರ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ₹14 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದ್ದು, ಇದರಲ್ಲಿ 18 ನಿವೇಶನಗಳು, ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ಸೇರಿದೆ.
04:35 PM (IST) Apr 11
ಚಿತ್ರದ ಆರಂಭದಿಂದ ಅಂತ್ಯದವರೆಗೂ ದ್ವೇಷ, ಹಿಂಸೆ, ಕೊಲೆ, ರಕ್ತದಿಂದ ತೊಯ್ದು ಮುದ್ದೆಯಾಗಿದೆ. ಆ ಮುದ್ದೆಗಳನ್ನು ನಿರ್ದೇಶಕ ರವಿ ಶ್ರೀವತ್ಸ ಅವರು ‘ಗ್ಯಾಂಗ್ಸ್ ಆಫ್ ಯುಕೆ’ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ಸುರಿದಿದ್ದಾರೆ.
04:33 PM (IST) Apr 11
04:22 PM (IST) Apr 11
ಯಾರು ಯಾರಿಗೆ ಯಾಕೆ ಹೊಡೆಯುತ್ತಿದ್ದಾರೆ ಅಂತ ಯೋಚಿಸಲೂ ಪುರುಸೊತ್ತಿಲ್ಲದಂತೆ ಹೊಡೆತ ಬೀಳುತ್ತಿರುತ್ತದೆ, ಗನ್ ಘರ್ಜಿಸುತ್ತಿರುತ್ತದೆ. ಇನ್ನೊಂದು ಬಗೆಯಲ್ಲಿ ನೋಡಿದರೆ ಇದು ಶ್ರೀಮಂತನಾಗಿ ಬೆಳೆದ ರಾಯ್ ಸಾಹಸಯಾತ್ರೆ.
04:12 PM (IST) Apr 11
Diamond King of India; ಕೆಲವು ಕನಸುಗಳು ಶುರುವಾಗುವುದೇ ಹಾಗೆ, ಶೂನ್ಯದಿಂದ. ಏನು ಇಲ್ಲದೆಯೇ ಶುರುವಾಗುವ ಕನಸೊಂದು ನಂತರ ಬೃಹದಾಕಾರವಾಗಿ ಬೆಳೆಯುತ್ತದೆ. ತಾನು ಬೆಳೆಯುವ ಜೊತೆಗೆ ಹಲವರಿಗೆ ಬದುಕು ನೀಡುತ್ತದೆ. ಹಾಗೆಯೇ ಶೂನ್ಯದಿಂದ ತಮ್ಮ ಉದ್ಯಮವನ್ನು ಆರಂಭಿಸಿದ ಸವ್ಜಿ ಧೋಲಕಿಯ ಅವರ ಕತೆ ಇಲ್ಲಿದೆ.
03:25 PM (IST) Apr 11
03:20 PM (IST) Apr 11
ಮಾಜಿ ಸಂಸದ ಅನಂತಕುಮಾರ್ ಹೆಗಡೆ ಅವರು, ತಮ್ಮ ಪುತ್ರ ಅಶುತೋಷ್ ಹೆಗಡೆ ವಿದೇಶದಲ್ಲಿ ವ್ಯಾಸಂಗ ಮಾಡಲು ಪಾಸ್ಪೋರ್ಟ್ ಸಮಸ್ಯೆ ಎದುರಿಸುತ್ತಿರುವ ಕಾರಣ, ದಾಬಸ್ಪೇಟೆ ಠಾಣೆಯಲ್ಲಿ ದಾಖಲಾಗಿರುವ ಹಲ್ಲೆ ಪ್ರಕರಣದಿಂದ ಅವರ ಹೆಸರನ್ನು ಕೈಬಿಡುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
03:02 PM (IST) Apr 11
Washing Machine: ವಾಶಿಂಗ್ ಮಶಿನ್ ಬಳಸುವಾಗ ಅನೇಕರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಮುಂದೆ ದೊಡ್ಡ ಅನಾಹುತವೇ ಸಂಭವಿಸಬಹುದು. ಅನೇಕ ಮಹಿಳೆಯರು ಮಲ್ಟಿ ಟ್ಯಾಲೆಂಟೆಡ್ ಆಗಿರುತ್ತಾರೆ. ಅವರು ಒಂದೇ ಬಾರಿಗೆ ಹಲವು ಕೆಲಸಗಳನ್ನು ಮಾಡುತ್ತಾರೆ. ಇದು ತಪ್ಪು.
02:35 PM (IST) Apr 11
02:24 PM (IST) Apr 11
Body Lotion: ಎಕ್ಸ್ಪೈರ್ ಆದ ಲೋಷನ್ ಅನ್ನು ಕಸಕ್ಕೆ ಹಾಕುವ ಬದಲು, ಅದರಿಂದ ಹಲವು ಸ್ಮಾರ್ಟ್ ಕೆಲಸಗಳನ್ನು ಮಾಡಬಹುದು. ಫರ್ನಿಚರ್ ಪಾಲಿಶ್, ಲೆದರ್ ವಸ್ತುಗಳ ಕ್ಲೀನಿಂಗ್, ಜಿಪ್ ಸರಿಪಡಿಸುವುದು ಮತ್ತು ಬಾಗಿಲಿನ ಸದ್ದು ನಿಲ್ಲಿಸಲು ಇದು ಸೂಪರ್ ಐಡಿಯಾ. ಇದರಿಂದ ವಸ್ತುಗಳು ವೇಸ್ಟ್ ಆಗುವುದೂ ತಪ್ಪುತ್ತದೆ.
02:23 PM (IST) Apr 11
01:11 PM (IST) Apr 11
01:03 PM (IST) Apr 11
'ಕರ್ಣ' ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ (ರಿಯಾ) ಅವರು ತಮ್ಮ ಬಿಡುವಿಲ್ಲದ ಶೂಟಿಂಗ್ ನಡುವೆಯೂ ಪಿಯುಸಿಯಲ್ಲಿ ಶೇ. 97ರಷ್ಟು ಅಂಕ ಗಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಪೋಷಕರ ಒತ್ತಡವಿಲ್ಲದ ಬೆಂಬಲ, ಮೊದಲ ದಿನದಿಂದಲೇ ತಯಾರಿ, ಸಮಯ ನಿರ್ವಹಣೆಯೇ ಯಶಸ್ಸಿಗೆ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.
12:05 PM (IST) Apr 11
11:46 AM (IST) Apr 11
ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಕಿಡಿಗೇಡಿಯೊಬ್ಬ ಹಚ್ಚಿದ ಬೆಂಕಿಯಿಂದಾಗಿ 6 ಅಮಾಯಕ ಹಸುಗಳು ಸಜೀವ ದಹನವಾಗಿವೆ. ನಾಯಿಗಳನ್ನು ಹೆದರಿಸಲು ಕಸಕ್ಕೆ ಬೆಂಕಿ ಹಚ್ಚಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದು, ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಈ ಕೃತ್ಯದ ಹಿಂದಿನ ನಿಜವಾದ ಉದ್ದೇಶವನ್ನು ತನಿಖೆ ಮಾಡುತ್ತಿದ್ದಾರೆ.
11:28 AM (IST) Apr 11
ಇರಾನ್-ಅಮೆರಿಕ ಸಂಘರ್ಷವು ಪಾಕಿಸ್ತಾನವನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ. ಭಾರತದ 'ಆಪರೇಷನ್ ಸಿಂಧೂರ್' ನಂತರ ಅಮೆರಿಕದತ್ತ ವಾಲಿದ ಪಾಕಿಸ್ತಾನ, ಈಗ ಸೌದಿ ಮತ್ತು ಯುಎಇ ಜೊತೆಗಿನ ರಕ್ಷಣಾ ಒಪ್ಪಂದಗಳಿಂದಾಗಿ ಇರಾನ್ ವಿರುದ್ಧ ಯುದ್ಧ ಮಾಡಬೇಕಾದ ಒತ್ತಡಕ್ಕೆ ಸಿಲುಕಿದೆ. ಪಾಕಿಸ್ತಾನದ ಮುಂದಿನ ನಡೆ ಏನು? ಓದಿ.
11:05 AM (IST) Apr 11
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಂಭೀರ ಎಡವಟ್ಟು ಮಾಡಿದೆ. ವಿದ್ಯಾರ್ಥಿಗಳಿಗೆ ಗರಿಷ್ಠ ಅಂಕಗಳಿಗಿಂತ ಹೆಚ್ಚು ಅಂಕಗಳನ್ನು ನೀಡಿ, ನಂತರ ತಾಂತ್ರಿಕ ದೋಷದ ಕಾರಣ ನೀಡಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದೆ.
10:45 AM (IST) Apr 11
DKD Show Contestants: ಡಾನ್ಸ್ ಕರ್ನಾಟಕ ಡಾನ್ಸ್ ಶೋ ಈಗ ಅಂತಿಮ ಘಟ್ಟ ತಲುಪಿದ್ದು ಫಿನಾಲೆ ಇದೆ ಏಪ್ರಿಲ್ 11 ಶನಿವಾರ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಮತ್ತು ಏಪ್ರಿಲ್ 12 ಭಾನುವಾರದಂದು ಸಂಜೆ 7 ಗಂಟೆಯಿಂದ 9:30 ರವರೆಗೆ ಪ್ರಸಾರ ಆಗಲಿದೆ.
10:34 AM (IST) Apr 11
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಉಪ ಚುನಾವಣೆ ಮುಗಿದಿದ್ದು, ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಮತದಾನದ ನಂತರ ಅವರು ಕುಟುಂಬ, ದೇವಸ್ಥಾನ ಮತ್ತು ಕಾರ್ಯಕರ್ತರೊಂದಿಗೆ ಸಮಯ ಕಳೆಯುತ್ತಿದ್ದು, ಮೇ 4ರ ಫಲಿತಾಂಶಕ್ಕೂ ಮುನ್ನ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.
10:11 AM (IST) Apr 11
Actor Sudarshan Rangaprasad: ಭಾಗ್ಯಲಕ್ಷ್ಮೀ ಧಾರಾವಾಹಿ ನಟ ಸುದರ್ಶನ್ ರಂಗಪ್ರಸಾದ್ ಹಾಗೂ ನಟಿ ಸಂಗೀತಾ ಭಟ್ ಜೋಡಿಗೆ ಇಂದು ಖುಷಿಯ ವಿಷಯ. ಇವರಿಬ್ಬರೂ 10 ವರ್ಷ ಪೂರೈಸಿ, ಹನ್ನೊಂದನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಫೋಟೋಶೂಟ್ ಹಂಚಿಕೊಂಡಿದ್ದಾರೆ.
10:06 AM (IST) Apr 11
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಪ್ರವಾಸವು ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಚರ್ಚೆಗಾಗಿಯೇ ಹೊರತು ಬೇರೆ ಕಾರಣಕ್ಕಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ವಿಶ್ವಾಸ. ಕುರುಬ ಸಮುದಾಯದ ಎಸ್ಟಿ ಮೀಸಲಾತಿ ಹೇಳಿದ್ದೇನು?
09:38 AM (IST) Apr 11
09:20 AM (IST) Apr 11
ಶಾಲಾ ಶಿಕ್ಷಣ ಇಲಾಖೆಯು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಮತ್ತು ಎನ್ಎಸ್ಕ್ಯೂಎಫ್ ವಿಷಯಗಳಿಗೆ ಪಾಸ್-ಫೇಲ್ ಪದ್ಧತಿ ಕೈಬಿಟ್ಟು ಗ್ರೇಡ್ ನೀಡುವ ಕರಡು ಅಧಿಸೂಚನೆ ಹೊರಡಿಸಿದೆ. 2025-26ನೇ ಸಾಲಿನಿಂದ ಜಾರಿಗೆ ಬರಲಿರುವ ಈ ನಿಯಮದಂತೆ, ಒಟ್ಟು ಫಲಿತಾಂಶ 525 ಅಂಕಗಳಿಗೆ ಸೀಮಿತಗೊಳಿಸಲಾಗುವುದು
09:03 AM (IST) Apr 11
ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಪಕ್ಷದ ಕೆಲವು ಮುಖಂಡರೇ ಷಡ್ಯಂತ್ರ ನಡೆಸಿದ್ದಾರೆ ಎಂದು ಸಲೀಂ ಅಹಮದ್ ಗಂಭೀರ ಆರೋಪ ಮಾಡಿದ್ದಾರೆ. ಈ ಪಿತೂರಿಯ ನಡುವೆಯೂ, ಅಲ್ಪಸಂಖ್ಯಾತರ ಮತಗಳಿಂದ ಕಾಂಗ್ರೆಸ್ ಭಾರಿ ಬಹುಮತದಿಂದ ಗೆಲ್ಲಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.